ಎರಡೂ ವಿಭಾಗಗಳಲ್ಲಿ ತಲಾ 250 ತರಬೇತಿ ನೌಕರರು ಇದ್ದಾರೆ. ಅವರಲ್ಲಿ ಪುತ್ತೂರು ವಿಭಾಗದಲ್ಲಿ 82 ಹಾಗೂ ಮಂಗಳೂರಿನಲ್ಲಿ 190 ಮಂದಿ ಕರ್ತವ್ಯಕ್ಕೆ ಹಾಜರಾದರು. ಸೋಮವಾರ ಪುತ್ತೂರು ವಿಭಾಗದಲ್ಲಿ 50 ಹಾಗೂ ಮಂಗಳೂರಿನಲ್ಲಿ 32 ನೌಕರರನ್ನು ವಜಾಗೊಳಿಸಲಾಗಿತ್ತು. ಪುತ್ತೂರು ವಿಭಾಗದಲ್ಲಿ ಮಂಗಳವಾರ ಆರು ಮಂದಿ ನೌಕರರನ್ನು ವಜಾಗೊಳಿಸಲಾಗಿದೆ. ಮುಷ್ಕರ ವೇಳೆ ಕರ್ತವ್ಯ ನಿತರ ಬಸ್ ಚಾಲಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರನ್ನು ವಜಾಗೊಳಿಸಲಾಗಿದೆ.