ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಕಂಚು ಗೆದ್ದ ಭವಾನಿಗೆ ಅದ್ಧೂರಿ ಸ್ವಾಗತ

ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಸಾಧಕಿಗೆ ರೈಲು ನಿಲ್ದಾಣದಲ್ಲಿ ಜೈಕಾರ
Published : 13 ಆಗಸ್ಟ್ 2023, 6:26 IST
Last Updated : 13 ಆಗಸ್ಟ್ 2023, 6:26 IST
ಫಾಲೋ ಮಾಡಿ
Comments
ರೈಲು ನಿಲ್ದಾಣದಲ್ಲಿ ನನಗೆ ಸಿಕ್ಕ ಅದ್ಧೂರಿ ಸ್ವಾಗತದಿಂದ ಮನತುಂಬಿ ಬಂದಿದೆ. ಇನ್ನಷ್ಟು ಸಾಧನೆಗೆ ಇದು ಸ್ಫೂರ್ತಿ ನೀಡಿದೆ
ಭವಾನಿ ಭಗವತಿ ಯಾದವ್‌ ಲಾಂಗ್‌ಜಂಪ್‌ ಅಥ್ಲೀಟ್‌
ನೆರವಿನ ನಿರೀಕ್ಷೆಯಲ್ಲಿದ್ದೇನೆ:
ಭವಾನಿ ‘ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಆಳ್ವಾಸ್‌ ವಿದ್ಯಾಸಂಸ್ಥೆ. ಉಚಿತ ಹಾಸ್ಟೆಲ್‌ ಹಾಗೂ ಕ್ರೀಡಾ ತಯಾರಿಗೆ ಸೌಕರ್ಯ ಕಲ್ಪಿಸುವ ಮೂಲಕ ನನ್ನ ಸಾಧನೆಗೆ ನೆರವಾದ ಡಾ.ಎಂ.ಮೋಹನ ಆಳ್ವ ಹಾಗೂ ವಿವೇಕ ಆಳ್ವ ಅವರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ನನ್ನ ತಂದೆ ಆಂಧ್ರಪ್ರದೇಶದ ವಿಜಯವಾಡದವರು. ಅವರೂ ತಮ್ಮಿಂದಾದಷ್ಟು ನೆರವಾಗುತ್ತಿದ್ದಾರೆ. ನನಗೊಂದು ನೌಕರಿ ಸಿಕ್ಕರೆ ಕ್ರೀಡಾ ತಯಾರಿಗೆ ಸಹಾಯವಾಗಲಿದೆ. ಕ್ರೀಡಾ ಉಪಕರಣಗಳ ಖರೀದಿಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ನೆರವನ್ನು ನಿರೀಕ್ಷಿಸುತ್ತಿದ್ದೇನೆ’ ಎಂದು ಭವಾನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಪಿ.ಜಿ. ಡಿಪ್ಲೊಮಾ ಇನ್ ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT