‘ಅಳಕೆಯಿಂದ ಕುದ್ರೋಳಿ ದೇವಸ್ಥಾನದವರೆಗೆ ಬೆಳಗ್ಗೆ 9ಕ್ಕೆ ವಧು-ವರರ ದಿಬ್ಬಣ ನಡೆಯಲಿದೆ. ಮಧ್ಯಾಹ್ನ 12.20ರ ಮೀನಲಗ್ನದಲ್ಲಿ ವಿವಾಹ ನೆರವೇರಲಿದೆ. ಈ ಪ್ರಯುಕ್ತ ಬೆಳಿಗ್ಗೆ 10ರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಗುರುಪುರ ವಜ್ರದೇಹಿಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಟ್ರಸ್ಟ್ನ ಸ್ಥಾಪಕಾಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ, ಉದ್ಯಮಿ ಕಿರಣ್ ಚಂದ್ರ ಧರ್ಮಸ್ಥಳ, ಸಾಮಾಜಿಕ ಕಾರ್ಯಕರ್ತ ಸಿ.ಕೆ ಮೌಲ ಶರೀಫ್, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಕುದ್ರೋಳಿ ಕ್ಷೇತ್ರದ ಆಡಲಿತ ಮಂಡಳಿ ಅಧ್ಯಕ್ಷ ಸಾಯಿರಾಮ್, ಖಜಾಂಚಿ ಪದ್ಮರಾಜ್ ಆರ್., ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಮತ್ತಿತರರು ಭಾಗವಹಿಸುವರು’ ಎಂದು ಪ್ರಕಟಣೆ ತಿಳಿಸಿದೆ.