ಮಂಗಳೂರು: ಶಾಸಕ ಯು.ಟಿ.ಖಾದರ್ ಅವರ ಜನ್ಮದಿನದಂದು ಅಭಿಮಾನಿಗಳು ಅಸೈಗೋಳಿಯ ಅಭಯ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಗೆ ಆಹಾರ ಹಂಚುವ ಕ್ರಮ ರೂಢಿಸಿಕೊಂಡಿದ್ದಾರೆ. ವರ್ಷದಂತೆ ಈ ಬಾರಿಯೂ ಬುಧವಾರ ಆಶ್ರಮಕ್ಕೆ ತೆರಳಿದಾಗ ಅಲ್ಲಿನ ವಾಸಿಯೊಬ್ಬರು ಶುಭಾಶಯ ಕೋರಲು ಫೋಟೊ ಪ್ರಿಂಟ್ ಹಾಕಿಸಿ, ಖಾದರ್ ಅವರಿಗೆ ಕಾಯುತ್ತಿದ್ದರು.