ದೇಶದ ಸಮಸ್ಯೆಗಳು, ಸ್ವಾತಂತ್ರ್ಯ ಹೋರಾಟದ ಉದ್ದೇಶಗಳನ್ನು ಅರಿಯದೇ, ‘ಭಾರತ ಮಾತ ಕೀ ಜೈ’ಎಂದು ಕೂಗುವುದೂ ವಂಚನೆಯೇ. ಹಿಂದುಳಿದ ಪ್ರದೇಶಗಳು, ಬುಡಕಟ್ಟು, ಪರಿಶಿಷ್ಟ ಜಾತಿ–ಜನಾಂಗಳು, ಬಡವರು, ಶೋಷಿತರಿಗೂ ‘ಸ್ವಾತಂತ್ರ್ಯ’ದ ಫಲ ಸಿಗಬೇಕು ಎಂದರು.
‘ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕನಿಷ್ಠ ಹತ್ತು ಭಾರತೀಯರು ಇರುತ್ತಾರೆ. ಬಾಬಾ ರಾಮದೇವ್ ಕೂಡಾ ಶ್ರೀಮಂತರಾಗಿದ್ದಾರೆ. ಇವರೆಲ್ಲ ಜನರಿಗೆ ಏನು ಕೊಟ್ಟಿದ್ದಾರೆ? ‘ಭಾರತ ಅಧ್ಯಾತ್ಮಿಕ ದೇಶ’ ಎನ್ನುವುದೇ ಬೋಗಸ್ ಅನ್ನಿಸಲು ಶುರುವಾಗುತ್ತದೆ. ಅಷ್ಟಮಠಗಳನ್ನು ಹೊಂದಿದ ಉಡುಪಿಯಲ್ಲಿ ನಾನು ಕ್ರಿಶ್ಚಿಯನ್ ಶಾಲೆಯಿಂದಾಗಿ ಶಿಕ್ಷಣ ಪಡೆದೆ. ಜರ್ಮನಿಯ ಕ್ರೈಸ್ತ ಮಿಷನರಿಯಾದ ಬಾಸೆಲ್ ಮಿಷನ್ ಸೇವೆ ಅನನ್ಯ’ ಎಂದರು.