ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್‌ ಬೆಂಬಲಿಗರಿಂದ ಅಪಹರಣಕ್ಕೆ ಯತ್ನ: ಸ್ಥಳೀಯರ ಆರೋಪ

Last Updated 9 ಜನವರಿ 2021, 3:38 IST
ಅಕ್ಷರ ಗಾತ್ರ

ಮಂಗಳೂರು: ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಲಪಾಡ್‌ ಬೆಂಬಲಿಗರು ಮಗುವಿನ ಅಪಹರಣದ ಆರೋಪ ಎದುರಿಸಿದ್ದು, ಕೆಲಕಾಲ ಕೊಣಾಜೆ ಠಾಣೆಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಲಪಾಡ್‌ ಅವರಿಗೆ ಮತಯಾಚನೆಗಾಗಿ ಬೆಂಗಳೂರಿನಿಂದ ಬೆಂಬಲಿಗರು ಮುಡಿಪುಗೆ ಬಂದಿದ್ದರು. ಮರಳುವಾಗ ದೇರಳಕಟ್ಟೆಯ ಬಳಿ ಬೆಂಬಲಿಗರಕಾರು ಮಗುವಿಗೆ ಡಿಕ್ಕಿಯಾಗಿದೆ. ಇದರಿಂದ ಮಗು ಗಾಯಗೊಂಡಿದೆ. ಸ್ಥಳದಲ್ಲಿ ಜಮಾಯಿಸಿದ ಜನರು, ಬೆಂಬಲಿಗರು ಮಗುವಿನ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಕಾರಿನಲ್ಲಿದ್ದವರನ್ನು ಕೊಣಾಜೆ ಠಾಣೆಗೆ ಕರೆತರಲಾಗಿತ್ತು. ಠಾಣೆಯ ಎದುರು ಯುವ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT