ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಜನ್ಧನ್, ಉಜ್ವಲಾದಂತಹ ಯೋಜನೆಗಳಿಂದ ಬಡಜನರ ಜೀವನಮಟ್ಟ ಸುಧಾರಿಸಿದೆ. ಕೇಂದ್ರ ಪೂರೈಸುವ ಅಕ್ಕಿಯನ್ನು ಹಂಚುತ್ತಿರುವ ರಾಜ್ಯ ಸರ್ಕಾರ ಅನ್ನಭಾಗ್ಯ ತನ್ನದೇ ಯೋಜನೆ ಎನ್ನುತ್ತಿದೆ. ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ₹11,500 ಕೋಟಿ ಅನುದಾನವನ್ನು ವಿನಿಯೋಗಿಸಿದೆ’ ಎಂದರು.