ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿಗಳಿಂದ ಬರಲಿಲ್ಲ ಸವಾಲಿಗೆ ತಕ್ಕ ಉತ್ತರ

ಸೀಲ್ ಮಾಡಿದ್ದ ಲಕೋಟೆ ತೆರೆದ ನರೇಂದ್ರ ನಾಯಕ್
Last Updated 1 ಜೂನ್ 2022, 16:43 IST
ಅಕ್ಷರ ಗಾತ್ರ

ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಭವಿಷ್ಯ ನುಡಿಯಲು ಕೆಲವು ಸವಾಲುಗಳನ್ನು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ನೀಡಲು ವಿಫಲರಾಗಿದ್ದಾರೆ.

ನರೇಂದ್ರ ನಾಯಕ್ ಅವರು ಮೇ 26ರಂದು ಬೆಳಿಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್‌ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ ₹ 1 ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸ್ಆ್ಯಪ್ ನಂಬರ್ ಹಾಗೂ ಇ–ಮೇಲ್‌ಗೆ ಕಳುಹಿಸಬಹುದು ಎಂದಿದ್ದರು.

ಈ ಹಿಂದೆ ತಿಳಿಸಿದಂತೆ ನರೇಂದ್ರ ನಾಯಕ್ ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್‌ನಲ್ಲಿ ಪೇಪರ್‌ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ 10 ದೀರಮ್, 4ನೆಯ ಕವರ್‌ನಲ್ಲಿ ನೇಪಾಳದ ಕರೆನ್ಸಿ, 5ನೆಯ ಕವರ್‌ನಲ್ಲಿ ಸಿಂಗಾಪುರದ 10 ಡಾಲರ್‌ ಬಿಲ್, 6ನೆಯದ್ದರಲ್ಲಿ Astrology Flopped miserably Once ಎಂದು ಬರೆಯಲಾಗಿತ್ತು. 7ನೇ ಕವರ್‌ನಲ್ಲಿ ಭಾರತದ ಕರೆನ್ಸಿ ₹ 10 ಇಡಲಾಗಿತ್ತು.

‘ನಾಲ್ವರು ಇದಕ್ಕೆ ಉತ್ತರ ನೀಡಲು ಯತ್ನಿಸಿದ್ದರು. ಎಲ್ಲ ಉತ್ತರಗಳು ತಪ್ಪಾಗಿವೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ವಾದ ಮತ್ತೊಮ್ಮೆ ಗೆದ್ದಿದೆ.ವೈಜ್ಞಾನಿಕ ಮನೋಭಾವ ಬೆಳೆಸುವುದೇ ನಮ್ಮ ಉದ್ದೇಶ. ಈ ಹಿಂದೆಯೂ ತಥಾಕಥಿತ ಜ್ಯೋತಿಷಿಗಳಿಗೆ ಇಂತಹ ಸವಾಲು ಹಾಕಿದ್ದೇನೆ. ಮುಂದೆಯೂ ಸವಾಲು ಸ್ವೀಕರಿಸುವವರಿದ್ದರೆ ನಾನು‌ ಸಿದ್ಧ’ ಎಂದು ನರೇಂದ್ರ ನಾಯಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿಚಾರವಾದಿಗಳ ಸಂಘದ ಸದಸ್ಯ ಶ್ಯಾಮ್ ಸುಂದರ್ ರಾವ್, ಪ್ರಭಾಕರ ಕಾಪಿಕಾಡ್ ಮತ್ತು ಡಾ.ಹರಿಯಪ್ಪ ಪೇಜಾವರ್, ಮಯೂರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT