ಮಂಗಳೂರು: ನವ ಮಂಗಳೂರು ಬಂದರು (ಎನ್ಎಂಪಿಟಿ) ಮಂಡಳಿಯ ನೂತನ ಪ್ರವೇಶ ದ್ವಾರಕ್ಕೆ ಕೇಂದ್ರ ಬಂದರು, ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಜರಿದ್ದರು.
ಪ್ರವೇಶ ದ್ವಾರವು 1,100 ಚದರ ಅಡಿ ವಿಸ್ತೀರ್ಣದಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಉದ್ದೇಶಿತ ಪ್ರವೇಶ ದ್ವಾರವು ಎರಡು ಆಗಮನ ಪಥ ಮತ್ತು ಎರಡು ನಿರ್ಗಮನ ಪಥ ಸೇರಿದಂತೆ ಒಟ್ಟು ನಾಲ್ಕು ಪಥಗಳನ್ನು ಹೊಂದಲಿದೆ.
ನಂತರ ಸಚಿವರು ಎನ್ ಎಂಪಿಟಿ ಆವರಣದೊಳಗಿನ ಚಟುವಟಿಕೆ ವೀಕ್ಷಿಸಿದರು.