ತಾಲ್ಲೂಕು ಮಟ್ಟದ ಕೀಡಾಕೂಟ ಆಯೋಜಿಸುವ ಜವಾಬ್ದಾರಿ ಹೊತ್ತಿದ್ದ ತುಂಬೆಯ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು (ಬಂಟ್ವಾಳ), ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ (ಮಂಗಳೂರು) ಮತ್ತು ಶಾಸಕ ಅಶೋಕ್ ಕುಮಾರ್ ರೈ (ಪುತ್ತೂರು) ಅವರ ಮತದಾರರು ಕ್ಷೇತ್ರ ಬಂಟ್ವಾಳಕ್ಕೆ ವಿಸ್ತರಿಸಿಕೊಂಡಿದೆ. ಹಿಂದೆ ಸಚಿವರಾಗಿದ್ದ ಬಿ.ರಮಾನಾಥ ರೈ ಅವರು ಬೆಂಜನಪದವಿನಲ್ಲಿ 9 ಎಕರೆ ಸರ್ಕಾರಿ ಜಮೀನು ಮತ್ತು ಒಂದು ಎಕರೆ ಖಾಸಗಿ ಜಮೀನು ಕ್ರೀಡಾಂಗಣಕ್ಕೆ ಮೀಸಲಿಟ್ಟು ₹ 10 ಕೋಟಿ ಅನುದಾನ ಮಂಜೂರುಗೊಳಿಸಿದ್ದರು. ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆಯೂ ನೆರವೇರಿತ್ತು. ಸರ್ಕಾರ ಬದಲಾವಣೆಯಾದ ನಂತರ ಅನುದಾನ ಮೊತ್ತ ವಾಪಸ್ ಹೋಗಿದೆ ಎಂಬ ಆರೋಪವಿದೆ.