ಮಂಗಳೂರು: ಕರಾವಳಿ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರು ಆಗಿರುವ ವಿವಿಧ ಹೊಸ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿಮೋಟ್ ಮೂಲಕ ನೆರವೇರಿಸಿದರು.
ಲೋಕಾರ್ಪಣೆಗೊಂಡ ಯೋಜನೆಗಳು:
* ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ ಯೋಜನೆ ವೆಚ್ಚ: ₹ 281 ಕೋಟಿ 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ
* ಬಿಎಸ್ 6 ಉನ್ನತೀಕರಣ ಯೋಜನೆ:ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ
ಯೋಜನೆ ವೆಚ್ಚ: ₹ 1,829 ಕೋಟಿ
* ಸಮುದ್ರ ನೀರಿನ ನಿರ್ಲವಣೀಕರಣ ಘಟಕ:ಶುದ್ಧ ನೀರಿನ ಸಂರಕ್ಷಣೆ
30 ಎಂಎಲ್ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ
ಯೋಜನೆ ವೆಚ್ಚ: ₹ 677 ಕೋಟಿ
ಶಿಲಾನ್ಯಾಸಗೊಂಡ ಯೋಜನೆಗಳು:
* ಎನ್ಎಂಪಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ
ಯೋಜನೆ ವೆಚ್ಚ: ₹ 500 ಕೋಟಿ
* ಎನ್ಎಂಪಿಯಲ್ಲಿ ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ
ಯೋಜನೆ ವೆಚ್ಚ: ₹ 100 ಕೋಟಿ
* ಎನ್ಎಂಪಿಎಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ
ಯೋಜನೆ ವೆಚ್ಚ: ₹ 100 ಕೋಟಿ
* ಎನ್ಎಂಪಿಎಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ
ಯೋಜನೆ ವೆಚ್ಚ: ₹ 100 ಕೋಟಿ
ಭೂಮಿಪೂಜೆ ಆಗಿರುವ ಕಾಮಗಾರಿ:
* ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ