ಪ್ರಧಾನ ಕಾರ್ಯದರ್ಶಿ ಎಸ್.ಪಿ.ಆನಂದ ಮಾತನಾಡಿ, ‘ಎನ್ಪಿಎಸ್ ರದ್ದುಗೊಳಿಸಿ, ಈ ಹಿಂದಿನ ಪಿಂಚಣಿ ಜಾರಿಗೆ ತರಬೇಕು. ಪೌರ ಕಾರ್ಮಿಕರಿಗೆ ವೈಯಕ್ತಿಕ ₹ 5 ಲಕ್ಷದವರೆಗೆ ಆರೋಗ್ಯ ಭದ್ರತೆ ನೀಡಬೇಕು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ನಿಧಿ ಮೀಸಲಿಡಬೇಕು. ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು ₹ 15 ಲಕ್ಷಕ್ಕೆ ಏರಿಸಬೇಕು. ವಾರ್ಡ್ ಕಚೇರಿಗಳಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ದಯಾನಂದ, ಸುರೇಶ್ ಉರ್ವ ಇದ್ದರು.