ಪ್ರಕೃತಿ ಫುಡ್ಸ್ನ ಮಾಲೀಕಪ್ರಕಾಶ್ ಪ್ರಭು, ‘ಸ್ಥಳದಲ್ಲೇ ತಿಂಡಿ ತಯಾರಿಸುವ 20 ಮಳಿಗೆಗಳು ಇರಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಳಿಗೆಗಳ ಜೊತೆಗೆ ವಿಜಯಪುರ, ಗೋಕಾಕ್, ಧಾರವಾಡ ಹಾಗೂ ಬೆಳಗಾವಿಯ ಮಳಿಗೆಗಳೂ ಇರಲಿವೆ. ಬೆಳಗಾವಿಯ ಕುಂದ, ಧಾರವಾಡದ ಪೇಡ, ಗೋಕಾಕ್ ಕರದಂಟನ್ನು ಸವಿಯಬಹುದು. ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುವ ಉಪ್ಪಿನಕಾಯಿ ಮತ್ತು ಹಲಸಿನ ಹಪ್ಪಳವೂ ಸೇರಿದಂತೆ ವಿವಿಧ ಬಗೆಯ ಹಪ್ಪಳಗಳು, ಹಣ್ಣಿನ ರಸಗಳು, ಚೆನ್ನಪಟ್ಟಣ ಗೊಂಬೆ, ಗೋವಿನ ಉತ್ಪನ್ನಗಳು, ಎಳೆ ತೆಂಗಿನಕಾಯಿಯ ಚಿಪ್ಸ್, ಖಾದಿ ಬಟ್ಟೆ ಮಳಿಗೆಗಳು ಇರಲಿವೆ. ಬಿದಿರಕ್ಕಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ, ಪತ್ರೊಡೆ, ಬಿದಿರಕ್ಕಿ ಬೆಣ್ಣೆದೋಸೆ, ಪಲಾವ್, ಲಡ್ಡು, ಸ್ಥಳದಲ್ಲೇ ತಯಾರಿಸುವ ಹಲಸಿನ ಹೋಳಿಗೆ, ಹಲಸಿನ ಗಟ್ಟಿ, ಹಲಸಿನ ಪಾಯಸ, ಸಾವಯವ ಧಾನ್ಯಗಳ ತಿನಿಸುಗಳು ಪ್ರಮುಖ ಆಕರ್ಷಣೆಗಳು’ ಎಂದರು.