ಸದಸ್ಯ ಭಾಮಿ ಅಶೋಕ್ ಶೆಣೈ ವಿಷಯ ಪ್ರಸ್ತಾಪಿಸಿ, ‘ಪುತ್ತೂರು –ಮಂಗಳೂರು ಮುಖ್ಯ ರಸ್ತೆಯ ರಾಜಕಾಲುವೆಯ ಬಳಿಯ ವಸತಿ ಸಂಕೀರ್ಣದ ಸುತ್ತ ಅಗ್ನಿಶಾಮಕದಳದ ವಾಹನ ಹೋಗುವ ವ್ಯವಸ್ಥೆ ಇಲ್ಲ. ಸಂಕೀರ್ಣದಲ್ಲಿ 87 ಮನೆಗಳಿದ್ದರೂ ರಸ್ತೆ ಕಿರಿದಾಗಿದೆ. ಆದರೆ, ತುರಾತುರಿಯಲ್ಲಿ ಬಾಗಿಲು ಸಂಖ್ಯೆ ಕೊಡಲಾಗಿದೆ. ಅದರ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣ ರಾಜಕಾಲುವೆಯ ಬಫರ್ ಝೋನ್ನಲ್ಲಿ ಇರುವುದಲ್ಲದೆ ವಾಹನ ನಿಲುಗಡೆ ವ್ಯವಸ್ಥೆ, ರಸ್ತೆ ಅಂಚು ಕೂಡ ಇಲ್ಲ. ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಯಾವ ಕಾನೂನು ಇಲ್ಲವೇ’ ಎಂದು ಪ್ರಶ್ನಿಸಿದರು.