ಕೋವಿಡ್–19 ಪರಿಣಾಮ ಈ ವರ್ಷ ವಿದ್ಯಾಲಯದ ಪ್ರವೇಶಾತಿ ಆರಂಭಗೊಂಡಿಲ್ಲ. ಇದರಿಂದ ಎಲ್ಲ ಶಾಲಾ–ಕಾಲೇಜುಗಳಂತೆ ಅಂಬಿಕಾ ವಿದ್ಯಾಲಯವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೆಲವು ಶಾಲೆಗಳು ಶಿಕ್ಷಕರ ವೇತನಕ್ಕೆ ಕತ್ತರಿ ಹಾಕಿದರೆ, ಇನ್ನೂ ಕೆಲವರು ಶೇ10 ರಷ್ಟು ಶಿಕ್ಷಕರನ್ನು ಕೈ ಬಿಟ್ಟಿದ್ದಾರೆ. ಆದರೆ, ಈ ಸವಾಲು ಎದುರಿಸಲು ಸನ್ನದ್ಧವಾದ ಪುತ್ತೂರಿನ ಅಂಬಿಕಾ ವಿದ್ಯಾಲಯವು ‘ಶಿವಂ ಫುಡ್ ಫ್ರಾಡಕ್ಟ್' ಆರಂಭದ ಮೂಲಕ ಬದುಕು ಕಲ್ಪಿಸಿದೆ.