‘ನಟುವಾಂಗದಲ್ಲಿ ಗುರು ವಿದ್ವಾನ್ ಯು.ಕೆ.ಪ್ರವೀಣ್, ಗಾಯನದಲ್ಲಿ ವಿದುಷಿ ಉಷಾ ಪ್ರವೀಣ್, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಎ., ಜಿ.ನೀಲೇಶ್ವರಂ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ವಿ.ಪಿ. ಸಹಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಸೇಂಟ್ ಅಲೊಷಿಯಸ್ ಕಾಲೇಜಿನ ಪ್ರಾಮಶುಪಾಲ ಫಾ.ಕ್ಲಿಫರ್ಡ್ ಸಿಕ್ವೇರಾ, ಸೇಂಟ್ ಥೆರೆಸಾ ಶಾಲೆಯ ಪ್ರಾಂಶುಪಾಲರಾದ ಭಗಿನಿ ಲೂರ್ದ್ಸ್ ಪ್ರಿನ್ಸ್ ಮೇರಿ ಬಿಎಸ್., ಬೆಂಗಳೂರಿನ ನಿರ್ಮಲ ನೃತ್ಯ ನಿಕೇತನದ ನಿರ್ದೇಶಕರಾದ ವಿದುಷಿ ನಿರ್ಮಲಾ ಮಂಜುನಾಥ, ನಗರದ ಸೇಂಟ್ ಅಲ್ಫೋನ್ಸಾ ಚರ್ಚ್ನ ಧರ್ಮಗುರು ರೆ.ಫಾ. ಮಣಿ ವೆಳ್ತೆಡ್ತ ಪರಂಬಿಲ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.