ಆರಗ ಜ್ಞಾನೇಂದ್ರ ಅವರು ಆಡಿರುವ ಮಾತುಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಜ್ಞಾನೇಂದ್ರ ಅವರು ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ 'ಶಿವಧೂತೆ ಗುಳಿಗೆ' ನಾಟಕದ ಬಗ್ಗೆ ಪ್ರಸ್ತಾಪಿಸಿ, ‘ಎಂಥದೋ ಗುಳಿಗೆ... ಗುಳಿಗೆ... ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ನಿನ್ನೆ ರಾತ್ರಿ ಎಂತದ್ದೋ ನಾಟಕವಂತೆ. ಇವರು ಯಾವ ಗುಳಿಗೆ ಕೊಡ್ತಾರೋ ಗೊತ್ತಿಲ್ಲ. ಬೇಕಾದ್ರೆ ಜಾಪಾಳ ಮಾತ್ರೆ ಕೊಟ್ಟರೂ ಕೊಡಬಹುದು, ಹೇಳಲಿಕ್ಕಾಗುವುದಿಲ್ಲ. ಇವರು ಹೊಸ ಹೊಸ ನಾಟಕಗಳನ್ನು ಪ್ರಾರಂಭ ಮಾಡಿದ್ದಾರೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.