ಹೊಟ್ಟೆಯಲ್ಲಿ ಗಾಳಿ ತುಂಬಿದೆ ಹಾಗೂ ಒಂದು ರಂಧ್ರವಿದೆ ಎಂದು ಎಕ್ಸ್ ರೇಯಿಂದ ಖಚಿತಗೊಂಡ ಬಳಿಕ, ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ರಂಧ್ರವು ಸಣ್ಣ ಕರುಳಿನ ಮೊದಲ ಭಾಗದಲ್ಲಿತ್ತು. ಶಸ್ತ್ರಚಿಕಿತ್ಸೆಯ ನಂತರ ಭುವಿತ್ನನ್ನು ಇಲೆಕ್ಟಿವ್ ಪೋಸ್ಟ್ ಆಪರೇಟಿವ್ ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಡಾ.ವಿ.ಪಿ. ಸಿಂಗ್ ಅವರ ಮಕ್ಕಳ ಶಸ್ತ್ರಚಿಕಿತ್ಸಾ ತಂಡ, ಇಂಟೆನ್ಸ್ವಿಸ್ಟ್ ಡಾ.ಜಯಪ್ರಕಾಶ್, ಅರಿವಳಿಕೆ ತಂಡ, ದಾದಿಯರ ತಂಡ ಕಾರ್ಯನಿರ್ವಹಿಸಿತ್ತು.