ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿಯುತ್ತಿರುವ ವಿವಿಧ ವಯೋಮಾನದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಮಂಗಳೂರು ನಗರದ ಶಾಲೆಯೊಂದರ ಬಳಿ ವಾಹನದಿಂದ ಇಳಿದು ಬ್ಯಾಗ್ಗಳನ್ನು ಹೆಗಲಿಗೇರಿಸಿಕೊಳ್ಳುವ ಧಾವಂತದಲ್ಲಿ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಭರತ್ ಕುಮಾರ್
ಅಬ್ಬರದ ಸಂಗೀತ ಹಾಕಬಾರದು ಶಾಲಾ ವಾಹನದಲ್ಲಿ ವಿಶೇಷವಾಗಿ ಸಣ್ಣ ಮಕ್ಕಳು ಪ್ರಯಾಣಿಸುವ ವಾಹನದಲ್ಲಿ ಅಬ್ಬರದ ಸಂಗೀತ ಹಾಕುವುದು ಸರಿಯಲ್ಲ. ಚಾಲಕನಿಗೆ ಇಷ್ಟ ಎಂಬ ಕಾರಣಕ್ಕೆ ಅದನ್ನು ಹಾಕಿದರೆ ವಾಹನದ ನಿಯಂತ್ರಣದ ಮೇಲೆ ನಿಗಾ ಇಲ್ಲದೆ ಅಪಘಾತ ಆಗುವ ಸಾಧ್ಯತೆ ಇದೆ. ಬೇರೆ ವಾಹನಗಳ ಹಾರನ್ ಕೇಳಿಸದೇ ತೊಂದರೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಹೊಡಿಬಡಿ ಹಾಡುಗಳನ್ನು ಹಾಕಿಕೊಂಡು ವಾಹನ ಚಾಲನೆ ಮಾಡದಂತೆ ಸಂಬಂಧಪಟ್ಟವರು ಚಾಲಕರಿಗೆ ಸೂಚಿಸಬೇಕು. ಇಲಾಖೆ ಈ ಬಗ್ಗೆ ಗಮನಹರಿಸಲಿದೆ.
–ವೆಂಕಟೇಶ ಪಟಗಾರ ಡಿಡಿಪಿಐ
ಶ್ರೀಧರ್ ಮಲ್ಲಾಡ್
ಇಲಾಖೆ ಜಾಗರೂಕವಾಗಿದೆ ನಿಯಮಗಳ ಪಾಲನೆಯ ದೃಷ್ಟಿಯಿಂದ ಸಲಹೆ ನೀಡುವುದು ದಂಡ ಹಾಕುವುದು ಇತ್ಯಾದಿ ನಡೆಯುತ್ತಲೇ ಇರುತ್ತದೆ. ಇದೆಲ್ಲದರ ಜೊತೆಯಲ್ಲಿ ಪೋಷಕರು ಮತ್ತು ಶಾಲಾ ಆಡಳಿತದವರು ಹೆಚ್ಚು ಕಾಳಜಿಯಿಂದ ವರ್ತಿಸಬೇಕು. ಒಟ್ಟಿನಲ್ಲಿ ಮಕ್ಕಳು ಶಾಲೆಗೆ ತಲುಪಿದರೆ ಸಾಕು ಅಥವಾ ಸಂಜೆ ಮನೆ ಸೇರಿದರಾಯಿತು ಎಂಬ ಭಾವನೆ ಬಿಡಬೇಕು. ವಾಹನಗಳ ಗುಣಮಟ್ಟ ಪಾಲನೆಯಲ್ಲಿ ಸಾರಿಗೆ ಇಲಾಖೆ ಜಾಗರೂಕವಾಗಿದೆ. ಈ ಭಾಗದಲ್ಲಿ ಹೆಚ್ಚು ತೊಂದರೆಗಳು ಅನುಭವಕ್ಕೆ ಬರಲಿಲ್ಲ.
–ಶ್ರೀಧರ ಕೆ.ಮಲ್ಲಾಡ ಸಾರಿಗೆ ಅಧಿಕಾರಿ
ದಿನೇಶ್ ಕುಮಾರ್
ಅಗತ್ಯ ಇರುವಲ್ಲಿ ಪೊಲೀಸರ ನಿಯೋಜನೆ ಕರ್ನಾಟಕ ಮೋಟಾರು ವಾಹನಗಳ ನಿಯಮ ಎಲ್ಲ ವಾಹನಗಳಿಗೂ ಅನ್ವಯವಾಗುತ್ತವೆ. ಆದರೂ ಮಕ್ಕಳು ಪ್ರಯಾಣಿಸುವುದರಿಂದ ಶಾಲಾ ವಾಹನಗಳ ಬಗ್ಗೆ ಹೆಚ್ಚು ಗಮನ ಬೇಕು. ವಾಹನ ವ್ಯವಸ್ಥೆ ಇರುವ ಶಾಲೆಗಳ ಪೈಕಿ ಬಹುತೇಕ ಕಡೆಗಳಲ್ಲಿ ನಿಯಮಗಳ ಪಾಲನೆ ಆಗುತ್ತಿದೆ. ಅನಿವಾರ್ಯ ಇರುವ ಪ್ರದೇಶಗಳ ಶಾಲೆಗಳ ಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಎಲ್ಲ ಕಡೆಗಳಲ್ಲಿ ಇಂಥ ವ್ಯವಸ್ಥೆ ಮಾಡಲು ಕಷ್ಟಸಾಧ್ಯ. ಆದ್ದರಿಂದ ಶಾಲಾ ಆಡಳಿತದವರೂ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು.