<p>ಬದಿಯಡ್ಕ: ಮುಳ್ಳೇರಿಯ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ 1989ರಿಂದ 2023ರ ವರೆಗಿನ ಸುಮಾರು 1,000 ವಿದ್ಯಾರ್ಥಿಗಳು ಒಗ್ಗೂಡಿ, ಶಾಲೆಗೆ ಅಗತ್ಯವಿರುವ ಸಿಸಿಟಿವಿ ಕ್ಯಾಮೆರಾ, ಎಲ್ಲ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ, ಕಲಿಕಾ ಸಾಮಗ್ರಿಗಳ ವಿತರಣೆ, ವೈದ್ಯಕೀಯ ಸಹಾಯ ನೀಡಲು ನಿರ್ಧರಿಸಿದ್ದಾರೆ.</p>.<p>ಬೀಮ್ಸ್ ಅಫ್ ವಿಎಚ್ಎಸ್ಇ ಸಂಘಟನೆಯ ಮೂಲಕ ಮಕ್ಕಳಿಗೆ ಮಾಹಿತಿ ಕಾರ್ಯಾಗಾರ, ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು. ಈ ಯೋಜನೆಯನ್ನು ಸಿನಿಮಾ ನಟ ಉಣ್ಣಿರಾಜ ಚೆರುವತ್ತೂರು ಉದ್ಘಾಟಿಸಿದರು.</p>.<p>ಪಯ್ಯನ್ನೂರಿನ ವೊಕೇಶನಲ್ ಹೈಯರ್ ಸೆಕೆಂಡರಿ ಪ್ರಾದೇಶಿಕ ಸಹಾಯಕ ನಿರ್ದೇಶಕಿ ಉದಯ ಕುಮಾರಿ, ವಿಎಚ್ಎಸ್ಇ ಪ್ರಾಂಶುಪಾಲ ಕೆ. ರಿಯಾಜ್, ಪಿಟಿಎ ಅಧ್ಯಕ್ಷ ಎಂ.ಪದ್ಮನಾಭನ್, ಮುಖ್ಯ ಶಿಕ್ಷಕ ಶಾಹುಲ್ ಹಮೀದ್, ಮೊಹಮ್ಮದ್ ನೌಫಲ್, ಎಂ.ಮೌನೇಶ್, ಶಂಸುದ್ದೀನ್ ಅಡೂರು ಉಪಸ್ಥಿತರಿದ್ದರು.</p>.<p>ಚಿಕಿತ್ಸಾ ಸಮಿತಿ ಹಾಗೂ ಸುಭಿಕ್ಷಾ ಯೋಜನೆಗೆ ನೆರವು ಸ್ವೀಕರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೌಫಲ್ ಸ್ವಾಗತಿಸಿದರು. ಮೌನೇಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬದಿಯಡ್ಕ: ಮುಳ್ಳೇರಿಯ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ 1989ರಿಂದ 2023ರ ವರೆಗಿನ ಸುಮಾರು 1,000 ವಿದ್ಯಾರ್ಥಿಗಳು ಒಗ್ಗೂಡಿ, ಶಾಲೆಗೆ ಅಗತ್ಯವಿರುವ ಸಿಸಿಟಿವಿ ಕ್ಯಾಮೆರಾ, ಎಲ್ಲ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ, ಕಲಿಕಾ ಸಾಮಗ್ರಿಗಳ ವಿತರಣೆ, ವೈದ್ಯಕೀಯ ಸಹಾಯ ನೀಡಲು ನಿರ್ಧರಿಸಿದ್ದಾರೆ.</p>.<p>ಬೀಮ್ಸ್ ಅಫ್ ವಿಎಚ್ಎಸ್ಇ ಸಂಘಟನೆಯ ಮೂಲಕ ಮಕ್ಕಳಿಗೆ ಮಾಹಿತಿ ಕಾರ್ಯಾಗಾರ, ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು. ಈ ಯೋಜನೆಯನ್ನು ಸಿನಿಮಾ ನಟ ಉಣ್ಣಿರಾಜ ಚೆರುವತ್ತೂರು ಉದ್ಘಾಟಿಸಿದರು.</p>.<p>ಪಯ್ಯನ್ನೂರಿನ ವೊಕೇಶನಲ್ ಹೈಯರ್ ಸೆಕೆಂಡರಿ ಪ್ರಾದೇಶಿಕ ಸಹಾಯಕ ನಿರ್ದೇಶಕಿ ಉದಯ ಕುಮಾರಿ, ವಿಎಚ್ಎಸ್ಇ ಪ್ರಾಂಶುಪಾಲ ಕೆ. ರಿಯಾಜ್, ಪಿಟಿಎ ಅಧ್ಯಕ್ಷ ಎಂ.ಪದ್ಮನಾಭನ್, ಮುಖ್ಯ ಶಿಕ್ಷಕ ಶಾಹುಲ್ ಹಮೀದ್, ಮೊಹಮ್ಮದ್ ನೌಫಲ್, ಎಂ.ಮೌನೇಶ್, ಶಂಸುದ್ದೀನ್ ಅಡೂರು ಉಪಸ್ಥಿತರಿದ್ದರು.</p>.<p>ಚಿಕಿತ್ಸಾ ಸಮಿತಿ ಹಾಗೂ ಸುಭಿಕ್ಷಾ ಯೋಜನೆಗೆ ನೆರವು ಸ್ವೀಕರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೌಫಲ್ ಸ್ವಾಗತಿಸಿದರು. ಮೌನೇಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>