ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಮಾರಧಾರ ನದಿಯಲ್ಲಿ ದನದ ಮೃತದೇಹ ಪತ್ತೆಯಾಗಿದೆ. ಮೊಸಳೆ ಬಾಯಿಗೆ ಸಿಲುಕಿ ದನ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಘಟ್ಟದ ಬಳಿ ಮೂರು ದಿನಗಳಿಂದ ದನದ ಮೃತದೇಹ ತೇಲುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಸ್ಥಳಿಯಾಡಳಿತ ಗಮನಕ್ಕೆ ತಂದಿದ್ದರು. ಆದರೂ ಮೃತದೇಹವನ್ನು ನದಿಯಿಂದ ತೆರವುಗೊಳಿಸಿರಲಿಲ್ಲ. ರವಿ ಕಕ್ಕೆ ಪದವು ಸಮಾಜ ಸೇವಾ ತಂಡದವರು ಮೃತದೇಹವನ್ನು ಬದಿಯಿಂದ ಹೊರ ತೆಗೆದು ದಫನ ಮಾಡಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.