ಸುಬ್ರಹ್ಮಣ್ಯ: ಇಲ್ಲಿನ ಕೊಲ್ಲಮೊಗ್ರು, ಹರಿಹರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ತಾಲೂಕು ಕೇಂದ್ರ ಸುಳ್ಯದಿಂದ 40 ಕಿಲೊ ಮೀಟರ್ ದೂರದಲ್ಲಿರುವ ಕಲ್ಮಕಾರು, ಕೊಲ್ಲಮೊಗ್ರು ಹರಿಹರ, ಬಾಳುಗೋಡು, ಉಪ್ಪುಕಳ ಭಾಗದ ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನದ ಫಲವಾಗಿ ಪತ್ರಕರ್ತರು, ಮಂತ್ರಿಗಳ, ಶಾಸಕರು ಮತ್ತು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇದೇ 9ರಂದು ನಡೆಯಲಿದೆ.