ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದ ನಳಿನ್ಕುಮಾರ್ ಅವರು ನ.12ಕ್ಕೆ ಟ್ವೀಟ್ ಮಾಡಿ, ಸುರತ್ಕಲ್ ಟೋಲ್ ತೆರವು ಸಂಬಂಧ ನ.11ಕ್ಕೆ ನೋಟಿಫಿಕೇಷನ್ ಆಗಿದ್ದಕ್ಕೆ, ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಇನ್ನೂ ತನಕ ಟೋಲ್ ಸಂಗ್ರಹ ನಿಂತಿಲ್ಲ. ಪ್ರತಿದಿನ ಅಂದಾಜು ₹ 11 ಲಕ್ಷದಷ್ಟು ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ಸಂಸದರ ಟ್ವೀಟ್ ನಂತರ ಪ್ರಯಾಣಿಕರಲ್ಲೂ ಗೊಂದಲ ಉಂಟಾಗಿದ್ದು, ಪ್ರತಿನಿತ್ಯ ಟೋಲ್ಗೇಟ್ನಲ್ಲಿ ಪ್ರಯಾಣಿಕರು ಮತ್ತು ಶುಲ್ಕ ಸಂಗ್ರಹ ಸಿಬ್ಬಂದಿ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ’ ಎಂದರು.