ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರತ್ಕಲ್ ಟೋಲ್ಗೇಟ್ ಸ್ಥಾಪನೆಗೆ 2013ರ ಜೂನ್ನಲ್ಲೇ ಅಧಿಸೂಚನೆ ಪ್ರಕಟವಾಗಿದೆ. ಆದರೆ, ಈಗ ಕೆಲವು ಕಾಂಗ್ರೆಸ್ ನಾಯಕರು ಟೋಲ್ಗೇಟ್ ವಿರೋಧಿ ಹೋರಾಟಗಾರರ ಜೊತೆ ಸೇರಿಕೊಂಡು ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಟೋಲ್ಗೇಟ್ಗೆ ಅಧಿಸೂಚನೆ ಪ್ರಕಟವಾದ ಕೂಡಲೇ ಅದನ್ನು ಕಾಂಗ್ರೆಸ್ನವರು ತಡೆಯಬಹುದಿತ್ತಲ್ಲವೇ. ಆಗ ಕೇಂದ್ರದಲ್ಲಿ ಕಾಂಗ್ರೆಸ್ನ ಆಸ್ಕರ್ ಫರ್ನಾಂಡಿಸ್ ಅವರೇ ಭೂಸಾರಿಗೆ ಸಚಿವರಾಗಿದ್ದರಲ್ಲವೇ’ ಎಂದು ಪ್ರಶ್ನಿಸಿದರು.