’ವಿಧಾನಸಭಾ ಚುನವಣಾ ಕರ್ತವ್ಯಕ್ಕೆ ನಮ್ಮ ಸಂಘದ ಸದಸ್ಯರ ಹಲವಾರು ವಾಹನಗಳನ್ನುಜಿಲ್ಲಾಡಳಿತ ಬಳಸಿಕೊಂಡಿತ್ತು. ಆದರೆ, ಬೆರಳೆಣಿಕೆಯ ವಾಹನಗಳಿಗೆ ಮಾತ್ರ ಬಾಡಿಗೆ ಪಾವತಿಸಿದ್ದರೆ. ಅದರಲ್ಲೂ ಸರ್ಕಾರ ನಿಗದಿ ಪಡಿಸಿದ್ದ ದರವನ್ನು ನೀಡಿಲ್ಲ. ಈ ಕುರಿತು ನಮ್ಮ ಸಂಘವು ಹಲವು ಬಾರಿ, ಜಿಲ್ಲಾಡಳಿತಕ್ಕೆ, ಜಿಲ್ಲಾಧಿಕಾರಿಗೆ, ಸಾರಿಗೆ ಇಲಾಖೆಗೆ ಹಾಗೂ ಸಚಿವರಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾಧಿಕಾರಿಗೆ ಅಹವಾಲು ಸಲ್ಲಿಸಿದ್ದೆವು. ಆದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.