ಮಂಗಳೂರು: ನಗರದ ಮತ್ತೊಂದು ಕಡೆ ಪ್ರಚೋದನಾಕಾರಿ ಗೋಡೆ ಬರಹವು ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.
ನಗರದ ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.
ಗೋಡೆಯ ಮೇಲೆ ‘Gustak e rasool ek hi saza tan say juda’ ಎಂದು ಬರೆಯಲಾಗಿದೆ. ಬರಹದಲ್ಲಿರುವುದು ‘ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ; ಅದು ದೇಹದಿಂದ ತಲೆ ಬೇರ್ಪಡಿಸುವುದು’ ಎಂದು ಹೇಳಲಾಗಿದೆ.