<p><strong>ಕಾಸರಗೋಡು</strong>: ಸಿಸಿಟಿವಿ ಕ್ಯಾಮೆರಾ (ಎಐ ಕ್ಯಾಮೆರಾ)ದಲ್ಲಿ ಸೆರೆಯಾದ ಸಂಚಾರ ನಿಯಮ ಉಲಂಘನೆ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷಗಳ ಅವಧಿಗೊಮ್ಮೆ ದಂಡ ಪಾವತಿಸುವಂತೆ ಕುಂಬಳೆಯ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ನೋಟಿಸ್ ರವಾನಿಸುತ್ತಿದೆ.</p>.<p>ಭಾರಿ ಪ್ರಮಾಣದ ಮೊತ್ತವನ್ನು ದಂಡವಾಗಿ ಪಾವತಿಸಬೇಕು ಎಂದು ಹಲವರು ಆತಂಕಗೊಂಡಿದ್ದಾರೆ.</p>.<p>ಬಂದ್ಯೋಡು, ಕುಂಬಳೆ-ಬದಿಯಡ್ಕ ರಸ್ತೆಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾದಲ್ಲಿ ಸೆರೆಯಾಗಿರುವ, ನಿಯಮ ಉಲ್ಲಂಘಿಸಿದ ಹಲವರಿಗೆ ನೋಟಿಸ್ ತಲುಪಿದೆ. ಕಾರು ಸಹಿತ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ಇರುವುದು, ದ್ವಿಕ್ರ ವಾಹನ ಸವಾರರು ಮತ್ತು ಸಹಸವಾರರು ಹೆಲ್ಮೆಟ್ ಧರಿಸದೆ ಇರುವ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>2021ರಿಂದ 2025ರವರೆಗಿನ ಅವಧಿಯಲ್ಲಿ ನಡೆದಿರುವ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಬಂಬ್ರಾಣದ ಭಾರಿ ವಾಹನ ಚಾಲಕರೊಬ್ಬರಿಗೆ ಬಂಬ್ರಾಣ, ಕುಂಬಳೆ-ಬದಿಯಡ್ಕ ರಸ್ತೆಯ ಮತ್ತು ಬಂದ್ಯೋಡು ಅಡ್ಕ ಪ್ರದೇಶದ ಎಐ ಕ್ಯಾಮೆರಾದಲ್ಲಿ ಸೆರೆಯಾದ ಪ್ರಕರಣಗಳ ಸಂಬಂಧ ₹ 1 ಲಕ್ಷ ದಂಡ ಪಾವತಿಸುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಮನೆಗಳಿಗೆ ಆಹಾರ ತಲುಪಿಸು ವ್ಯಕ್ತಿಯೊಬ್ಬರಿಗೆ ಇದೇ ರೀತಿ ₹ 1.5 ಲಕ್ಷ ದಂಡ ಪಾವತಿಸುವಂತೆ, ಕುಂಬಳೆಯ ಮೆಕ್ಯಾನಿಕ್ ಒಬ್ಬರಿಗೆ ₹ 50 ಸಾವಿರ ದಂಡ ವಿಧಿಸಲಾಗಿದೆ.</p>.<p>ಎಐ ಕ್ಯಾಮೆರಾದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಈ ವಿಳಂಬಕ್ಕೆ ಕಾರಣ. ದುರಸ್ತಿಯಾದ ನಂತರ ದೃಶ್ಯಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ವೇಳೆ ಈ ರೀತಿ ಆಗಿದೆ ಎಂದು ಕಾಸರಗಗೋಡಿನ ಸಾರಿಗೆ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಕಾನೂನನ್ನು ಗೌರವಿಸಿ, ದಂಡ ಪಾವತಿಸಲು ನಾವು ಸಿದ್ಧರಾದರೂ, ಈ ರೀತಿ ಏಕಾಏಕಿ ದಂಡ ಪಾತಿಸಬೇಕೆಂಬ ಕ್ರಮವನ್ನು ಸಡಿಲಗಳಿಸಬೇಕು ಎಂಬ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಸ್ಪಂದಿಸದೆ ಇದ್ದರೆ ಹೋರಾಟ ನಡೆಸುವೆವು ಎಂದು ನೋಟಿಸ್ ಪಡೆದ ಕುಂಬಳೆಯ ವಾಹನ ಚಾಲಕರೊಬ್ಬರು ತಿಳಿಸಿದರು.</p>.<p><strong>ಉಪ್ಪಳಗೇಟ್ ಬಳಿ ಅಪಘಾತ ಹೆಚ್ಚಳ</strong></p>.<p>ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಉಪ್ಪಳಗೇಟ್ ಬಳಿ ವಾಹನ ಅಪಘಾತ ಹೆಚ್ಚಾಗುತ್ತಿದ್ದು, ಎರಡೂವರೆ ತಿಂಗಳಲ್ಲಿ ಮೂವರು ಮೃತಪಟ್ಟಿದ್ದಾರೆ.</p>.<p>ಪ್ರತಿ ದಿನ ಇಲ್ಲಿ ಅಪಘಾತಗಳು ನಡೆಯುತ್ತಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನವೀಕರಣ ನಡೆಸುವ ವೇಳೆ ಅಪಘಾತ ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಸಿಸಿಟಿವಿ ಕ್ಯಾಮೆರಾ (ಎಐ ಕ್ಯಾಮೆರಾ)ದಲ್ಲಿ ಸೆರೆಯಾದ ಸಂಚಾರ ನಿಯಮ ಉಲಂಘನೆ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷಗಳ ಅವಧಿಗೊಮ್ಮೆ ದಂಡ ಪಾವತಿಸುವಂತೆ ಕುಂಬಳೆಯ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ನೋಟಿಸ್ ರವಾನಿಸುತ್ತಿದೆ.</p>.<p>ಭಾರಿ ಪ್ರಮಾಣದ ಮೊತ್ತವನ್ನು ದಂಡವಾಗಿ ಪಾವತಿಸಬೇಕು ಎಂದು ಹಲವರು ಆತಂಕಗೊಂಡಿದ್ದಾರೆ.</p>.<p>ಬಂದ್ಯೋಡು, ಕುಂಬಳೆ-ಬದಿಯಡ್ಕ ರಸ್ತೆಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾದಲ್ಲಿ ಸೆರೆಯಾಗಿರುವ, ನಿಯಮ ಉಲ್ಲಂಘಿಸಿದ ಹಲವರಿಗೆ ನೋಟಿಸ್ ತಲುಪಿದೆ. ಕಾರು ಸಹಿತ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ಇರುವುದು, ದ್ವಿಕ್ರ ವಾಹನ ಸವಾರರು ಮತ್ತು ಸಹಸವಾರರು ಹೆಲ್ಮೆಟ್ ಧರಿಸದೆ ಇರುವ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>2021ರಿಂದ 2025ರವರೆಗಿನ ಅವಧಿಯಲ್ಲಿ ನಡೆದಿರುವ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಬಂಬ್ರಾಣದ ಭಾರಿ ವಾಹನ ಚಾಲಕರೊಬ್ಬರಿಗೆ ಬಂಬ್ರಾಣ, ಕುಂಬಳೆ-ಬದಿಯಡ್ಕ ರಸ್ತೆಯ ಮತ್ತು ಬಂದ್ಯೋಡು ಅಡ್ಕ ಪ್ರದೇಶದ ಎಐ ಕ್ಯಾಮೆರಾದಲ್ಲಿ ಸೆರೆಯಾದ ಪ್ರಕರಣಗಳ ಸಂಬಂಧ ₹ 1 ಲಕ್ಷ ದಂಡ ಪಾವತಿಸುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಮನೆಗಳಿಗೆ ಆಹಾರ ತಲುಪಿಸು ವ್ಯಕ್ತಿಯೊಬ್ಬರಿಗೆ ಇದೇ ರೀತಿ ₹ 1.5 ಲಕ್ಷ ದಂಡ ಪಾವತಿಸುವಂತೆ, ಕುಂಬಳೆಯ ಮೆಕ್ಯಾನಿಕ್ ಒಬ್ಬರಿಗೆ ₹ 50 ಸಾವಿರ ದಂಡ ವಿಧಿಸಲಾಗಿದೆ.</p>.<p>ಎಐ ಕ್ಯಾಮೆರಾದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಈ ವಿಳಂಬಕ್ಕೆ ಕಾರಣ. ದುರಸ್ತಿಯಾದ ನಂತರ ದೃಶ್ಯಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ವೇಳೆ ಈ ರೀತಿ ಆಗಿದೆ ಎಂದು ಕಾಸರಗಗೋಡಿನ ಸಾರಿಗೆ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಕಾನೂನನ್ನು ಗೌರವಿಸಿ, ದಂಡ ಪಾವತಿಸಲು ನಾವು ಸಿದ್ಧರಾದರೂ, ಈ ರೀತಿ ಏಕಾಏಕಿ ದಂಡ ಪಾತಿಸಬೇಕೆಂಬ ಕ್ರಮವನ್ನು ಸಡಿಲಗಳಿಸಬೇಕು ಎಂಬ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಸ್ಪಂದಿಸದೆ ಇದ್ದರೆ ಹೋರಾಟ ನಡೆಸುವೆವು ಎಂದು ನೋಟಿಸ್ ಪಡೆದ ಕುಂಬಳೆಯ ವಾಹನ ಚಾಲಕರೊಬ್ಬರು ತಿಳಿಸಿದರು.</p>.<p><strong>ಉಪ್ಪಳಗೇಟ್ ಬಳಿ ಅಪಘಾತ ಹೆಚ್ಚಳ</strong></p>.<p>ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಉಪ್ಪಳಗೇಟ್ ಬಳಿ ವಾಹನ ಅಪಘಾತ ಹೆಚ್ಚಾಗುತ್ತಿದ್ದು, ಎರಡೂವರೆ ತಿಂಗಳಲ್ಲಿ ಮೂವರು ಮೃತಪಟ್ಟಿದ್ದಾರೆ.</p>.<p>ಪ್ರತಿ ದಿನ ಇಲ್ಲಿ ಅಪಘಾತಗಳು ನಡೆಯುತ್ತಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನವೀಕರಣ ನಡೆಸುವ ವೇಳೆ ಅಪಘಾತ ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>