ಅಧ್ಯಕ್ಷತೆ ವಹಿಸಿದ್ದ ಪ್ರೊ. ರಾಜಾರಾಮ ರಾವ್, ತರಬೇತಿಯಿಂದ ಶಿಕ್ಷಕರಲ್ಲಿ ಪುನರ್ಮನನ, ಪುನಶ್ಚೇತನ ಆಗುತ್ತದೆ. ಶಿಕ್ಷಕ ಪಠ್ಯ ಬೋಧಕ ಅಷ್ಟೇ ಅಲ್ಲ ತನ್ನ ವಿದ್ಯಾರ್ಥಿಗಳಿಗೆ ಗೆಳೆಯ, ಮಾರ್ಗದರ್ಶಕ, ತರಬೇತುದಾರ ಹಾಗೂ ಕೆಲವೊಮ್ಮೆ ಪೋಷಕರಷ್ಟೇ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಕರು ಹೊಸ ತಂತ್ರಜ್ಞಾನಯುಗದಲ್ಲಿ ಎದೆಗುಂದದಿರಲು ಅವರಿಗೂ ನಿರಂತರ ತರಬೇತಿ ಅಗತ್ಯ’ ಎಂದರು.