ಅಂದು ನಾಲ್ಕು ಜೋಡಿಗಳ ವಿವಾಹ ನಡೆಯಲಿದೆ. ಉಡುಪಿ ಜಿಲ್ಲಾ ಸಂಯುಕ್ತ ಖಾಜಿ ಶೈಖುನಾ ಜೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ನಡೆಯುವ ವಿವಾಹದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಸಯ್ಯದ್ ಅಬ್ದುರ್ರಹಮಾನ್ ಸಾದತ್ ತಂಙಳ್ ದುಆ ನೆರವೇರಿಸುವರು. ಮಂಗಳಪೇಟೆ ಮುಹಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎ. ಹಸನಬ್ಬ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಖತೀಬ ಶಫೀಕ್ ಸಖಾಫಿ ಉದ್ಘಾಟಿಸುವರು. ಶಾಸಕರಾದ ಯು.ಟಿ.ಖಾದರ್, ಬಿ.ಎಂ.ಫಾರೂಕ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಕೆ.ಅಭಯಚಂದ್ರ ಜೈನ್ ಭಾಗವಹಿಸುವರು ಎಂದರು. ಪತ್ರಿಕೆ ಸಂಪಾದಕ ಎಂ.ಎಚ್.ಹಸನ್ ಝಹರಿ, ಸಿಬ್ಬಂದಿ ತೌಸೀಫ್ ಇದ್ದರು.