ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಸತ್ವವನ್ನು ಜಗತ್ತಿಗೆ ಸಾರಿದ ಮೇರು ಕೃತಿ ರಾಮಾಯಣ. ಅದನ್ನು ರಚಿಸಿದ ಕೀರ್ತಿ ವಾಲ್ಮೀಕಿ ಅವರಿಗೆ ಸಂದಿದೆ. ಎಷ್ಟೇ ಕೆಟ್ಟವನಾದರೂ ವ್ಯಕ್ತಿಗೆ ಸುಧಾರಣೆಯಾಗುವ ಅವಕಾಶವಿದೆ ಎಂದು ಅವರು ತೋರಿಸಿಕೊಟ್ಟಿದಾರೆ ಎಂದರು.