ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ದುಬಾರಿ ತರಕಾರಿ ಖರೀದಿಗೆ ನಿರಾಸಕ್ತಿ

ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಉಪಟಳದಿಂದ ಕಡಿಮೆಯಾದ ಆವಕ
Published : 21 ಜೂನ್ 2024, 7:29 IST
Last Updated : 21 ಜೂನ್ 2024, 7:29 IST
ಫಾಲೋ ಮಾಡಿ
Comments
ಎಲ್ಲರಿಗೂ ತಿನ್ನಲು ಬಗೆಬಗೆಯ ಆಹಾರ ಪದಾರ್ಥ ಬೇಕು. ತರಕಾರಿ ಬೆಳೆಯಲು ಯಾರೂ ಮುಂದಾಗುವುದಿಲ್ಲ. ದಕ್ಷಿಣ ಕನ್ನಡ ಭಾಗದ್ದೇ ಆದ ಅನೇಕ ತರಕಾರಿ ಬೇರೆ ಕಡೆಯವರು ಬೆಳೆದು ಇಲ್ಲಿಗೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಯೋಗೀಶ್ ಪೊಳಲಿ ತರಕಾರಿ ವ್ಯಾಪಾರಿ
ಬೀನ್ಸ್‌ ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದುಬಾರಿಯಾಗುವುದು ಕಂಡಿದ್ದೇನೆ. ಈ ಬಾರಿ ಇನ್ನು ಕೂಡ ದರ ಇಳಿಯಲೇ ಇಲ್ಲ. ಕ್ಯಾರೆಟ್ ದರ ₹ 60 ದಾಟಿದ್ದೇ ಇಲ್ಲ. ಕಳೆದ ವಾರ ₹ 40 ಇದ್ದದ್ದು ಈಗ ಏಕಾಏಕಿ ₹ 75ರಿಂದ 80ಕ್ಕೆ ಏರಿದೆ.
–ಥಾಮಸ್ ಲೋಬೊ ವ್ಯಾಪಾರಿ ಬಂಟ್ಸ್ ಹಾಸ್ಟೆಲ್‌
ಆಲೂಗಡ್ಡೆ ಈರುಳ್ಳಿ ದಾಸ್ತಾನು
ತರಕಾರಿ ಬೆಲೆ ಲೆಕ್ಕಕ್ಕೆ ಸಿಗದಂತೆ ಗಗನದೆತ್ತರೆಕ್ಕೆ ಏರುತ್ತಿದೆ ಎಂದು ಹೇಳಿದ ಹಾಪ್‌ಕಾಮ್ಸ್ ಮಂಗಳೂರು ವಿಭಾಗದ ವ್ಯವಸ್ಥಾಪಕ ರವೀಂದ್ರ ಶೆಟ್ಟಿ ಟೊಮ್ಯಾಟೊ ದರ ಈ ಬಾರಿ ಅಚ್ಚರಿ ಮೂಡಿಸಿದೆ ಎಂದರು. ಆಲೂಗಡ್ಡೆ ಮತ್ತು ಈರುಳ್ಳಿ ಆವಕ ಕಡಿಮೆ ಆಗಬಹುದು ಎಂಬ ಸಂದೇಹ ಇತ್ತು. ಆದ್ದರಿಂದ ಅವರೆಡನ್ನು ಒಂದು ವಾರಕ್ಕೆ ಆಗುವಷ್ಟು ದಾಸ್ತಾನು ಇರಿಸಲಾಗಿದೆ. ಆದರೆ ಅನಿರೀಕ್ಷಿತವಾಗಿ ಟೊಮ್ಯಾಟೊ ದರ ವಿಪರೀತ ಏರಿಕೆ ಕಂಡಿದೆ. ಬೆಲೆ ಹೆಚ್ಚು ನೀಡಿದರೂ ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಟೊಮ್ಯಾಟೊ ಗುಣಮಟ್ಟದ್ದಲ್ಲ. ಎರಡನೇ ದಿನದಲ್ಲಿ ಹಾಳಾಗುವುದರಿಂದ ಸಂಹ್ರಹಿಸಿಡುವುದಕ್ಕೂ ಆಗುವುದಿಲ್ಲ. ಆದ್ದರಿಂದ ಗ್ರಾಹಕರಿಗೂ ಅಂಗಡಿಯವರಿಗೂ ನಷ್ಟ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತರಕಾರಿ ಬೆಂಗಳೂರು ಭಾಗದಿಂದ ಬರಬೇಕು. ಇಲ್ಲೇ ತರಕಾರಿ ಬೆಳೆಯುವ ಸಂಸ್ಕೃತಿ ಬೆಳೆಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ತೊಂದರೆ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೃಷಿ ಭೂಮಿ ಬಿಟ್ಟು ಮಂಗಳೂರಿನಲ್ಲಿ ನೆಲೆ
ಲೋಕೇಶ್‌ ಕನಕಪುರದವರು. ಅಲ್ಲಿ ಜಮೀನು ಇದೆ. ರಾಗಿ ಕಡ್ಲೆಕಾಯಿ ಜೊತೆಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ ಈಚೆಗೆ ಪ್ರಾಣಿಗಳ ಕಾಟದಿಂದಾಗಿ ಜಮೀನನ್ನು ಬೇರೆಯವರಿಗೆ ಭೋಗ್ಯಕ್ಕೆ ಕೊಟ್ಟು ಮಂಗಳೂರಿನಲ್ಲಿ ನೆಲೆಸಿದ್ದಾರೆ. ‘ಮಂಗಗಳ ಕಾಟ ತಡೆಯುವುದಕ್ಕಾಗುವುದಿಲ್ಲ. ಜಮೀನಿಗೆ ಮಾತ್ರವಲ್ಲ ಹೆಂಚು ತೆಗೆದು ಮನೆಯ ಒಳಗೂ ಬರುತ್ತವೆ. ತುಂಬ ಜನರು ಜೊತೆಗೂಡಿ ಕೃಷಿ ಮಾಡಿದರೆ ಮಂಗಗಳನ್ನು ಓಡಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡುವವರಿಗೆ ಜಮೀನು ಭೋಗ್ಯಕ್ಕೆ ಕೊಟ್ಟಿದ್ದೇವೆ. ಅರಣ್ಯ ಇಲಾಖೆಯ ನಿಯಮಗಳಿಂದಾಗಿ ಪ್ರಾಣಿಗಳನ್ನು ತಡೆಯುವುದು ಕಷ್ಟ ಆಗುತ್ತಿದೆ. ಮುತ್ತತ್ತಿಯ ಆಂಜನೇಯ ದೇವಸ್ಥಾನದ ಹೊರಗೆ ಎಸೆದ ಆಹಾರ ತಿನ್ನಲು ಕಾಡುಹಂದಿಗಳೇ ಬರುತ್ತಿವೆ. ನಮ್ಮಲ್ಲೆಲ್ಲ ಬಹುತೇಕರು ರೇಷ್ಮೆ ಕೃಷಿಯತ್ತ ವಾಲಿದ್ದಾರೆ. ರೇಷ್ಮೆ ಎಲೆಯನ್ನು ಮಂಗ ತಿನ್ನುವುದಿಲ್ಲ’ ಎಂದು ಲೋಕೇಶ್ ಹೇಳಿದರು. ಸ್ಥಳೀಯ ಬೆಳೆಗಳೂ ಇಲ್ಲದಾಗುತ್ತಿವೆ. ಹಿಂದೆಲ್ಲ ನನ್ನೂರು ಪೊಳಲಿಯಿಂದ ನಗರಕ್ಕೆ ಬೆಳಿಗ್ಗೆ ನಾಲ್ಕೈದು ದೊಡ್ಡ ವಾಹನಗಳಲ್ಲಿ ತರಕಾರಿ ಬರುತ್ತಿತ್ತು. ಈಗ ಆಟೊದಲ್ಲಿ ಹಾಕಿಕೊಂಡು ಬರುವುದಕ್ಕೂ ತರಕಾರಿ ಇಲ್ಲ. ಅಲ್ಲಿ ನವಿಲಿನ ಕಾಟ. ಕಾಳಜಿ ಆಸಕ್ತಿಯಿಂದ ಬೆಳೆದರೂ ನವಿಲಿನಿಂದ ರಕ್ಷಿಸಲು ತುಂಬ ಹೆಣಗಾಡಬೇಕು. ಅದಕ್ಕೆ ಯಾರೂ ತಯಾರಿಲ್ಲ. ಹಣ ಕೊಟ್ಟರೆ ಬಗೆಬಗೆಯ ತರಕಾರಿ ಸಿಗುತ್ತದೆ. ಹಾಗಿರುವಾಗ ಸುಮ್ಮನೇ ಕಷ್ಟಪಡುವುದು ಯಾಕೆ ಎಂಬ ಧೋರಣೆ ಜನರಲ್ಲಿ ತುಂಬಿದೆ’ ಎನ್ನುತ್ತಾರೆ ವ್ಯಾಪಾರಿ ಯೋಗೀಶ್ ಪೊಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT