ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿ ಪೂಜೆ ಹಾಗೂ ದೇವರ ಬಲಿ ಪ್ರದಕ್ಷಿಣೆಗೆ ಅಡಚಣೆ ಉಂಟಾಯಿತು. ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಪಕ್ಷಿಕೆರೆ, ಪಡುಪಣಂಬೂರು, ಮಾನಂಪಾಡಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಕಂಡಿಬಂದಿತು. ಚಿತ್ರಾಪು ಬಳಿ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.