ಬೆಂಗಳೂರಿನ ಅನಿಲ್ (32) ಮೃತಪಟ್ಟ ಯುವಕ. ಬೆಂಗಳೂರಿನಿಂದ ಬಂದಿದ್ದ ಏಳು ಮಂದಿ ಯುವಕರ ಪೈಕಿ ಮೂವರು ಕರ್ನಿರೆ ಬಳಿ ಶಾಂಭವಿ ನದಿಯಲ್ಲಿ ಈಜಲು ಇಳಿದಿದ್ದರು. ಮೂವರೂ ನದಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ನೆರವಿಗೆ ಬಂದಿದ್ದು, ಇಬ್ಬರನ್ನು ಸ್ಥಳಿಯರು ರಕ್ಷಿಸಲು ಸಾಧ್ಯವಾಗಿದೆ. ಮೂಲ್ಕಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.