ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಎಂಬಲ್ಲಿ ಬೈಕ್ ಹಾರ್ನ್ ಹಾಕಿರುವುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ.
ಸ್ಥಳೀಯ ನಿವಾಸಿ ಮಹಮ್ಮದ್ ಆಶಿಕ್ (27) ಕೊಲೆಯಾದ ಯುವಕ.
ಸ್ಥಳೀಯ ನಿವಾಸಿಗಳಾದ ನೌಫಾಲ್ ಮತ್ತು ಆಸಿಫ್ ಎಂಬವರು ಕೊಲೆ ಆರೋಪಿಗಳು. ಇವರೆಲ್ಲರೂ ಚಿರಪರಿಚಿತರೇ ಆಗಿದ್ದು, ಸೋಮವಾರ ತಡರಾತ್ರಿಆಶಿಕ್ ಬೈಕ್ ಹಾರ್ನ್ ಹಾಕಿರುವುದನ್ನು ಆರೋಪಿಗಳು ಆಕ್ಷೇಪಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಬಳಿಕ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ನಗರ ಠಾಣೆ ಇನ್ಸ್ಪೆಕ್ಟರ್ ವಿವೇಕಾನಂದ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.