ಅನುರಾಧಾ ರಾಜೀವ್ ಬರೆದು ಪ್ರಕಟಿಸಿರುವ ಭಾವ ಘಮಲು ಮತ್ತು ಅಂತರಂಗ ಸಂವಾದ ಕೃತಿಗಳನ್ನು ಕಡಂಬೋಡಿ ಮಹಾಬಲ ಪೂಜಾರಿ ಮತ್ತು ಕುಸುಮ ಮಹಾಬಲ ಪೂಜಾರಿ ಲೋಕಾರ್ಪಣೆ ಮಾಡಿದರು. ಕೃತಿಗಳ ಬಗ್ಗೆ ಗಣೇಶ್ ಪ್ರಸಾದ್ ಪಾಂಡೆಲ ಮತ್ತು ಗುಣವತಿ ರಮೇಶ್ ಮಾತನಾಡಿದರು. ಅರ್ಪಿತಾ ಶೆಟ್ಟಿ ಕಟ್ಪಾಡಿ ತುಳುನಾಡಿನ ಕೃಷಿ ಬದುಕಿನ ವೈಶಿಷ್ಟ್ಯ ತಿಳಿಸಿದರು. ಮಧುಕರ ಅಮೀನ್, ಯಾದವ ದೇವಾಡಿಗ, ಅಂಬಿಕಾ ಪ್ರಸಾದ್ ಶೆಟ್ಟಿ, ಸದಾಶಿವ ಕುದ್ರಿಪದವು, ಯಶೋಧರ ಸಾಲ್ಯಾನ್, ಮುಲ್ಕಿ ಚಂದ್ರಶೇಖರ್ ಸುವರ್ಣ, ರಾಜೀವ ಸಾಲ್ಯಾನ್, ಮಹಾವೀರ ಜೈನ್, ಪುಷ್ಪಲತಾ ರಾವ್, ಅಧ್ಯಯನ ಕೇಂದ್ರದ ಅಧ್ಯಕ್ಷ ಗಣೇಶ ಅಮೀನ್ ಸಂಕಮಾರ್, ಜಯಂತಿ ಸಂಕಮಾರ್, ಭವ ಸಂಕಮಾರ್ ಇದ್ದರು.