<p><strong>ಉಡುಪಿ: </strong>ದಲಿತರ ಅಹವಾಲು ಆಲಿಸಿ ಬಗೆ ಹರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಕರೆಯಲಾಗ್ದ್ದಿದ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಬಣಗಳು ಪರಸ್ಪರ ಕಚ್ಚಾಟಕ್ಕಿಳಿದವು. ಇದರಿಂದಾಗಿ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.<br /> <br /> ಜಿಲ್ಲಾಧಿಕಾರಿ ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ವರಿಷ್ಠ ವೈ.ಎಸ್.ರವಿಕುಮಾರ್, ಕುಂದಾಪುರ ಸಹಾಯಕ ಆಯುಕ್ತ ಸದಾಶಿವ ಪ್ರಭು ಹಾಗೂ ಇತರ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿಯೇ ಗದ್ದಲ, ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. <br /> <br /> `ದಲಿತ ಸರ್ಕಾರಿ ನೌಕರರನ್ನು ಸಭೆಯಿಂದ ಹೊರಕ್ಕೆ ಹಾಕಿ~ ಎನ್ನುವ ವಿಚಾರದಲ್ಲಿ ನಡೆದ ಗದ್ದಲ ತಾರಕ್ಕೇರಿತು. ಕೊನೆಗೂ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ `ನಿಮ್ಮಲ್ಲಿಯೇ ಸಹಮತವಿಲ್ಲದಿದ್ದರೆ ಈ ಸಭೆಯನ್ನು ಮುಂದೂಡಲಾಗುವುದು~ ಎಂದು ಪ್ರಕಟಿಸುವ ಮೂಲಕ ಗಲಾಟೆಗೆ ತೆರೆ ಎಳೆದರು.<br /> <br /> ಮಾಧ್ಯಮದವರನ್ನು ಸಭೆಗೆ ಬಿಡಲ್ಲ: ಸಭೆ ಪ್ರಾರಂಭವಾಗುತ್ತಿದ್ದಂತೆ ಉಪಸ್ಥಿತರಿದ್ದ ಮಾಧ್ಯಮದವರನ್ನು ಕಂಡ ಜಿಲ್ಲಾಧಿಕಾರಿಗಳು `ಇದು ಅಧಿಕಾರಿಗಳ ಸಭೆ. ಮಾಧ್ಯಮದವರು ಹೊರಗೆಹೋಗಬೇಕು~ ಎಂದು ತಿಳಿಸಿದರು. ಆಗ ಸಭೆಯಲ್ಲಿ ಹಾಜರಿದ್ದ ದಲಿತ ಸಂಘರ್ಷ ಸಮಿತಿಯವರು `ಇದು ಅಧಿಕಾರಿಗಳ ಸಭೆಯಲ್ಲ, ಇದು ದಲಿತರ ಸಭೆ. <br /> <br /> ಮಾಧ್ಯಮದವರಿಗೆ ಇಲ್ಲಿನ ದಲಿತರ ಸ್ಥಿತಿಗತಿ ತಿಳಿಯಬೇಕು. ಹೀಗಾಗಿ ಮಾಧ್ಯಮದವರ ಎದುರೇ ಸಭೆ ನಡೆಯಬೇಕು. ನೆರೆಯ ಮಂಗಳೂರಿನಲ್ಲಿ ಕೂಡ ಇಂಥ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನೀಡುತ್ತಾರೆ~ ಎಂದು ಆಗ್ರಹಿಸಿದರು.<br /> <br /> ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ `ಬೇರೆ ಜಿಲ್ಲೆಯವರು ಏನು ಮಾಡುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ಆದರೆ ಅಧಿಕಾರಿಗಳ ಸಭೆಗೆ ನಾವು ಮಾಧ್ಯಮದವರನ್ನು ಬಿಡುವುದಿಲ್ಲ. ನಂತರ ಸಂಬಂಧಪಟ್ಟ ಅಧಿಕಾರಿಗಳು ಬೇಕಿದ್ದರೆ ಮಾಧ್ಯಮದವರಿಗೆ ಸಭೆಯ ವಿವರ ನೀಡಲಿ~ ಎಂದರು.<br /> <br /> ಅದನ್ನು ಪ್ರತಿಭಟಿಸಿದ ಕೆಲವರು, `ಇದೇನು ಸರ್ಕಾರಿ ದಲಿತ ನೌಕರರ ಸಭೆಯಾ ಅಥವಾ ನಿಜವಾದ ದಲಿತರ ಕುಂದು ಕೊರತೆ ಆಲಿಸುವ ಸಭೆಯಾ?~ ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿದರು. <br /> <br /> ಆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಅಧ್ಯಕ್ಷ ಜಯನ್ ಮಲ್ಪೆ ಗದ್ದಲ ಮಾಡುವವರನ್ನು ಸುಮ್ಮನಿರಿಸಲು ಹೋದರು. ಆಗ ಗದ್ದಲ ಹೆಚ್ಚಿತು. `ದಲಿತ ಸರ್ಕಾರಿ ನೌಕರರೇ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಸಭೆಯಿಂದ ಹೊರಹಾಕಿ~ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡ ಉದಯ ತಲ್ಲೂರು ಆಗ್ರಹಿಸಿದರು.<br /> <br /> ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಹೆಚ್ಚಿತು. ಕೆಲಕಾಲ ಏನೂ ಕೇಳಿಸಿದ ಸ್ಥಿತಿ ನಿರ್ಮಾಣವಾಯಿತು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಎಲ್ಲರೂ ಅವಾಕ್ಕಾಗಿದ್ದರು. ಕೊನೆಗೂ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಗದ್ದಲ ತಿಳಿಗೊಳಿಸಿದರು.<br /> <br /> `ನಿಮ್ಮಲ್ಲಿ ಸಹಕಾರ ಮನೋಭಾವ ಕಾಣುತ್ತಿಲ್ಲ. ನಿಮ್ಮಳಗೆ ಕಚ್ಚಾಟ ಸರಿಯಲ್ಲ. ಮುಂದಿನ ಸಭೆಗೆ ನಿಮ್ಮ ಬಣಗಳಲ್ಲಿ ಪ್ರತಿಯೊಂದು ಬಣದ ಕೇವಲ 5 ಸದಸ್ಯರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಅವರ ಹೆಸರನ್ನು ಕೂಡ ನೀವು ಮೊದಲೇ ನೀಡಬೇಕು. ನಿಮ್ಮಲ್ಲಿ ಸಹಮತ ಮೂಡುವವರೆಗೆ ನಾವು ಸಭೆ ನಡೆಸುವುದಿಲ್ಲ~ ಎಂದು ಜಿಲ್ಲಾಧಿಕಾರಿ ತಿಳಿಸಿದರು.<br /> <br /> ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಬಣ, ಭೀಮವಾದ ಬಣ, ಕೃಷ್ಣಪ್ಪ ಬಣ, ಡಿಎಸ್ಎಸ್ ಹಾಗೂ ಸಮತಾದಳದವರು ಈ ಸಂದರ್ಭದಲ್ಲಿ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ದಲಿತರ ಅಹವಾಲು ಆಲಿಸಿ ಬಗೆ ಹರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಕರೆಯಲಾಗ್ದ್ದಿದ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಬಣಗಳು ಪರಸ್ಪರ ಕಚ್ಚಾಟಕ್ಕಿಳಿದವು. ಇದರಿಂದಾಗಿ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.<br /> <br /> ಜಿಲ್ಲಾಧಿಕಾರಿ ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ವರಿಷ್ಠ ವೈ.ಎಸ್.ರವಿಕುಮಾರ್, ಕುಂದಾಪುರ ಸಹಾಯಕ ಆಯುಕ್ತ ಸದಾಶಿವ ಪ್ರಭು ಹಾಗೂ ಇತರ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿಯೇ ಗದ್ದಲ, ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. <br /> <br /> `ದಲಿತ ಸರ್ಕಾರಿ ನೌಕರರನ್ನು ಸಭೆಯಿಂದ ಹೊರಕ್ಕೆ ಹಾಕಿ~ ಎನ್ನುವ ವಿಚಾರದಲ್ಲಿ ನಡೆದ ಗದ್ದಲ ತಾರಕ್ಕೇರಿತು. ಕೊನೆಗೂ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ `ನಿಮ್ಮಲ್ಲಿಯೇ ಸಹಮತವಿಲ್ಲದಿದ್ದರೆ ಈ ಸಭೆಯನ್ನು ಮುಂದೂಡಲಾಗುವುದು~ ಎಂದು ಪ್ರಕಟಿಸುವ ಮೂಲಕ ಗಲಾಟೆಗೆ ತೆರೆ ಎಳೆದರು.<br /> <br /> ಮಾಧ್ಯಮದವರನ್ನು ಸಭೆಗೆ ಬಿಡಲ್ಲ: ಸಭೆ ಪ್ರಾರಂಭವಾಗುತ್ತಿದ್ದಂತೆ ಉಪಸ್ಥಿತರಿದ್ದ ಮಾಧ್ಯಮದವರನ್ನು ಕಂಡ ಜಿಲ್ಲಾಧಿಕಾರಿಗಳು `ಇದು ಅಧಿಕಾರಿಗಳ ಸಭೆ. ಮಾಧ್ಯಮದವರು ಹೊರಗೆಹೋಗಬೇಕು~ ಎಂದು ತಿಳಿಸಿದರು. ಆಗ ಸಭೆಯಲ್ಲಿ ಹಾಜರಿದ್ದ ದಲಿತ ಸಂಘರ್ಷ ಸಮಿತಿಯವರು `ಇದು ಅಧಿಕಾರಿಗಳ ಸಭೆಯಲ್ಲ, ಇದು ದಲಿತರ ಸಭೆ. <br /> <br /> ಮಾಧ್ಯಮದವರಿಗೆ ಇಲ್ಲಿನ ದಲಿತರ ಸ್ಥಿತಿಗತಿ ತಿಳಿಯಬೇಕು. ಹೀಗಾಗಿ ಮಾಧ್ಯಮದವರ ಎದುರೇ ಸಭೆ ನಡೆಯಬೇಕು. ನೆರೆಯ ಮಂಗಳೂರಿನಲ್ಲಿ ಕೂಡ ಇಂಥ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನೀಡುತ್ತಾರೆ~ ಎಂದು ಆಗ್ರಹಿಸಿದರು.<br /> <br /> ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ `ಬೇರೆ ಜಿಲ್ಲೆಯವರು ಏನು ಮಾಡುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ಆದರೆ ಅಧಿಕಾರಿಗಳ ಸಭೆಗೆ ನಾವು ಮಾಧ್ಯಮದವರನ್ನು ಬಿಡುವುದಿಲ್ಲ. ನಂತರ ಸಂಬಂಧಪಟ್ಟ ಅಧಿಕಾರಿಗಳು ಬೇಕಿದ್ದರೆ ಮಾಧ್ಯಮದವರಿಗೆ ಸಭೆಯ ವಿವರ ನೀಡಲಿ~ ಎಂದರು.<br /> <br /> ಅದನ್ನು ಪ್ರತಿಭಟಿಸಿದ ಕೆಲವರು, `ಇದೇನು ಸರ್ಕಾರಿ ದಲಿತ ನೌಕರರ ಸಭೆಯಾ ಅಥವಾ ನಿಜವಾದ ದಲಿತರ ಕುಂದು ಕೊರತೆ ಆಲಿಸುವ ಸಭೆಯಾ?~ ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿದರು. <br /> <br /> ಆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಅಧ್ಯಕ್ಷ ಜಯನ್ ಮಲ್ಪೆ ಗದ್ದಲ ಮಾಡುವವರನ್ನು ಸುಮ್ಮನಿರಿಸಲು ಹೋದರು. ಆಗ ಗದ್ದಲ ಹೆಚ್ಚಿತು. `ದಲಿತ ಸರ್ಕಾರಿ ನೌಕರರೇ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಸಭೆಯಿಂದ ಹೊರಹಾಕಿ~ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡ ಉದಯ ತಲ್ಲೂರು ಆಗ್ರಹಿಸಿದರು.<br /> <br /> ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಹೆಚ್ಚಿತು. ಕೆಲಕಾಲ ಏನೂ ಕೇಳಿಸಿದ ಸ್ಥಿತಿ ನಿರ್ಮಾಣವಾಯಿತು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಎಲ್ಲರೂ ಅವಾಕ್ಕಾಗಿದ್ದರು. ಕೊನೆಗೂ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಗದ್ದಲ ತಿಳಿಗೊಳಿಸಿದರು.<br /> <br /> `ನಿಮ್ಮಲ್ಲಿ ಸಹಕಾರ ಮನೋಭಾವ ಕಾಣುತ್ತಿಲ್ಲ. ನಿಮ್ಮಳಗೆ ಕಚ್ಚಾಟ ಸರಿಯಲ್ಲ. ಮುಂದಿನ ಸಭೆಗೆ ನಿಮ್ಮ ಬಣಗಳಲ್ಲಿ ಪ್ರತಿಯೊಂದು ಬಣದ ಕೇವಲ 5 ಸದಸ್ಯರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಅವರ ಹೆಸರನ್ನು ಕೂಡ ನೀವು ಮೊದಲೇ ನೀಡಬೇಕು. ನಿಮ್ಮಲ್ಲಿ ಸಹಮತ ಮೂಡುವವರೆಗೆ ನಾವು ಸಭೆ ನಡೆಸುವುದಿಲ್ಲ~ ಎಂದು ಜಿಲ್ಲಾಧಿಕಾರಿ ತಿಳಿಸಿದರು.<br /> <br /> ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಬಣ, ಭೀಮವಾದ ಬಣ, ಕೃಷ್ಣಪ್ಪ ಬಣ, ಡಿಎಸ್ಎಸ್ ಹಾಗೂ ಸಮತಾದಳದವರು ಈ ಸಂದರ್ಭದಲ್ಲಿ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>