<p>ಮಂಗಳೂರು: ಎಂಎಸ್ಇಜೆಡ್ನ ತ್ಯಾಜ್ಯ ಗಳನ್ನು ಸಮುದ್ರಕ್ಕೆ ಬಿಡುವ ಪೈಪ್ಲೈನ್ ಅಳವಡಿಕೆಗೆ ಸುರತ್ಕಲ್ ಭಾಗದಲ್ಲಿ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ರುವುದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಮೀನುಗಾರಿಗೆ ಸೂಕ್ತ ಪ್ಯಾಕೇಜ್ ಮೂಲಕ ನಷ್ಟ ಪರಿಹಾರದ ಕೊಡುಗೆ ಮುಂದಿಟ್ಟಿದೆ.<br /> <br /> ಪಣಂಬೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕೆ.ವಾಸುದೇವ್ ಅವರ ನೇತೃತ್ವದಲ್ಲಿ ಪಣಂಬೂರು, ಚಿತ್ರಾಪುರ, ಮೀನಕಳಿಯ, ಸುರತ್ಕಲ್, ಮುಕ್ಕ ಮತ್ತಿತರ ಭಾಗದ ಸಾಂಪ್ರದಾಯಿಕ ಮೀನುಗಾರರು ಸೋಮವಾರ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಅವರನ್ನು ಭೇಟಿ ಮಾಡಿದಾಗ ಜಿಲ್ಲಾಧಿಕಾರಿ ಅವರಿಂದ ಈ ಭರವಸೆ ವ್ಯಕ್ತವಾಯಿತು.<br /> <br /> ಎಂಎಸ್ಇಜೆಡ್ಗಾಗಿ ಪೈಪ್ಲೈನ್ ಅಳವ ಡಿಕೆ ಆಗಲೇಬೇಕು. ಆ ಕೆಲಸವನ್ನು ಕೈಬಿಡುವಂತಿಲ್ಲ. ಇದಕ್ಕೆ ಪ್ರತಿಯಾಗಿ ಮೀನು ಗಾರರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡ ಬಹುದು. ತಾವು ಇದರ ಹೊಣೆ ಹೊತ್ತು ಕೊಂಡು ಸೂಕ್ತ ಸೌಲಭ್ಯ ಸಿಗುವಂತೆ ನೋಡಿ ಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದರು.<br /> <br /> ಈಗಾಗಲೇ ಸಮುದ್ರಕ್ಕೆ ಬಿಡುತ್ತಿರುವ ತ್ಯಾಜ್ಯಗಳಿಂದ ಮೀನಿನ ಸಂತತಿ ನಶಿಸಿದೆ. ಎಂಎಸ್ಇಜೆಡ್ ಬಂದ ಬಳಿಕ ನಾಡದೋಣಿ ಮೀನುಗಾರಿಕೆಯನ್ನೇ ನಂಬಿಕೊಂಡವರ ಬದುಕು ಶೋಚನೀಯವಾಗುವುದು ನಿಶ್ಚಿತ ಎಂದು ಮೀನುಗಾರರು ಅಳಲು ತೋರಿಕೊಂಡರು.<br /> <br /> ಮೀನುಗಾರರಿಗೆ ಸೂಕ್ತ ತರಬೇತಿ ಕೊಟ್ಟು, ಉದ್ಯೋಗಕ್ಕೆ ಸೇರಿಸಿಕೊಳ್ಳಬಹುದು ಎಂದು ಚನ್ನಪ್ಪ ಗೌಡ ಅವರು ತಿಳಿಸಿದರು. ಮೀನುಗಾರಿಕೆಯಲ್ಲಿ 65 ವರ್ಷದವರೂ ತೊಡಗಿಕೊಳ್ಳುವುದರಿಂದ ಅವರಿಗೆ ಕೆಲಸ ಕೊಡಿಸಲು ಸಾಧ್ಯವೇ ಎಂದು ನಿಯೋಗದಲ್ಲಿದ್ದವರು ಪ್ರಶ್ನಿಸಿದರು.<br /> <br /> 20 ಮಂದಿಯ ಗುಂಪು ರಚಿಸಿ ಅವರಿಗೆ ಯಾಂತ್ರೀಕೃತ ದೋಣಿಗಳ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ, ಬಂಡವಾಳದ ಒಂದಿಷ್ಟು ಭಾಗವನ್ನು ಮಾತ್ರ ಮೀನುಗಾರರು ತೊಡಗಿಸಿದರೆ ಸಾಕು. ಈ ಪ್ರಸ್ತಾಪ ಒಪ್ಪಿಗೆಯಾದರೆ ಅದರ ಬಗ್ಗೆ ಶೀಘ್ರ ಕಾರ್ಯತಂತ್ರ ರೂಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.<br /> <br /> ಜಿಲ್ಲಾಡಳಿತ ನೀಡಿದ ಈ ಕೊಡುಗೆ ಮೀನುಗಾರರಿಗೆ ಒಪ್ಪಿಗೆಯಾಗುವಂತೆ ಕಂಡಿದ್ದು, ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರವುದಾಗಿ ಮೀನುಗಾರರು ತಿಳಿಸಿದರು.<br /> <br /> ಆದರೆ ಪರಿಹಾರ ಪ್ಯಾಕೇಜ್ಗೆ ಸ್ಪಷ್ಟ ರೂಪ ಸಿಗುವವರೆಗೆ ಎಂಎಸ್ಇಜೆಡ್ ಪೈಪ್ಲೈನ್ ಕಾಮಗಾರಿ ಆರಂಭಕ್ಕೆ ಅವಕಾಶ ನೀಡಲಾಗದು ಎಂದು ಮೀನುಗಾರರು ಸ್ಪಷ್ಟಪಡಿಸಿದರು.<br /> <br /> ನಿಯೋಗದಲ್ಲಿ ವಾಸುದೇವ್ ಜತೆ ವಾಮನ ಅಮೀನ್, ಯತೀಶ್ ಬೈಕಂಪಾಡಿ, ದಿನೇಶ್ ಪಣಂಬೂರು ಮತ್ತಿತರರು ಇದ್ದರು.<br /> <br /> ಎಂಎಸ್ಇಜೆಡ್ ಪೈಪ್ಲೈನ್ ಅಳವಡಿಸಲು ಕಳೆದ ಗುರುವಾರ ಬಾರ್ಜ್ ಮೇಲಿನ ಯಂತ್ರ ಸಿದ್ಧತೆ ನಡೆಸುತ್ತಿದ್ದಂತೆಯೇ ಹತ್ತಾರು ದೋಣಿ ಗಳಲ್ಲಿ ತೆರಳಿದ ಮೀನುಗಾರರು ತೀವ್ರ ಪ್ರತಿ ಭಟನೆ ನಡೆಸಿದ್ದರು. ಬೆಚ್ಚಿದ ಗುತ್ತಿಗೆ ದಾರರು ಯಂತ್ರ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಎಂಎಸ್ಇಜೆಡ್ನ ತ್ಯಾಜ್ಯ ಗಳನ್ನು ಸಮುದ್ರಕ್ಕೆ ಬಿಡುವ ಪೈಪ್ಲೈನ್ ಅಳವಡಿಕೆಗೆ ಸುರತ್ಕಲ್ ಭಾಗದಲ್ಲಿ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ರುವುದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಮೀನುಗಾರಿಗೆ ಸೂಕ್ತ ಪ್ಯಾಕೇಜ್ ಮೂಲಕ ನಷ್ಟ ಪರಿಹಾರದ ಕೊಡುಗೆ ಮುಂದಿಟ್ಟಿದೆ.<br /> <br /> ಪಣಂಬೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕೆ.ವಾಸುದೇವ್ ಅವರ ನೇತೃತ್ವದಲ್ಲಿ ಪಣಂಬೂರು, ಚಿತ್ರಾಪುರ, ಮೀನಕಳಿಯ, ಸುರತ್ಕಲ್, ಮುಕ್ಕ ಮತ್ತಿತರ ಭಾಗದ ಸಾಂಪ್ರದಾಯಿಕ ಮೀನುಗಾರರು ಸೋಮವಾರ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಅವರನ್ನು ಭೇಟಿ ಮಾಡಿದಾಗ ಜಿಲ್ಲಾಧಿಕಾರಿ ಅವರಿಂದ ಈ ಭರವಸೆ ವ್ಯಕ್ತವಾಯಿತು.<br /> <br /> ಎಂಎಸ್ಇಜೆಡ್ಗಾಗಿ ಪೈಪ್ಲೈನ್ ಅಳವ ಡಿಕೆ ಆಗಲೇಬೇಕು. ಆ ಕೆಲಸವನ್ನು ಕೈಬಿಡುವಂತಿಲ್ಲ. ಇದಕ್ಕೆ ಪ್ರತಿಯಾಗಿ ಮೀನು ಗಾರರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡ ಬಹುದು. ತಾವು ಇದರ ಹೊಣೆ ಹೊತ್ತು ಕೊಂಡು ಸೂಕ್ತ ಸೌಲಭ್ಯ ಸಿಗುವಂತೆ ನೋಡಿ ಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದರು.<br /> <br /> ಈಗಾಗಲೇ ಸಮುದ್ರಕ್ಕೆ ಬಿಡುತ್ತಿರುವ ತ್ಯಾಜ್ಯಗಳಿಂದ ಮೀನಿನ ಸಂತತಿ ನಶಿಸಿದೆ. ಎಂಎಸ್ಇಜೆಡ್ ಬಂದ ಬಳಿಕ ನಾಡದೋಣಿ ಮೀನುಗಾರಿಕೆಯನ್ನೇ ನಂಬಿಕೊಂಡವರ ಬದುಕು ಶೋಚನೀಯವಾಗುವುದು ನಿಶ್ಚಿತ ಎಂದು ಮೀನುಗಾರರು ಅಳಲು ತೋರಿಕೊಂಡರು.<br /> <br /> ಮೀನುಗಾರರಿಗೆ ಸೂಕ್ತ ತರಬೇತಿ ಕೊಟ್ಟು, ಉದ್ಯೋಗಕ್ಕೆ ಸೇರಿಸಿಕೊಳ್ಳಬಹುದು ಎಂದು ಚನ್ನಪ್ಪ ಗೌಡ ಅವರು ತಿಳಿಸಿದರು. ಮೀನುಗಾರಿಕೆಯಲ್ಲಿ 65 ವರ್ಷದವರೂ ತೊಡಗಿಕೊಳ್ಳುವುದರಿಂದ ಅವರಿಗೆ ಕೆಲಸ ಕೊಡಿಸಲು ಸಾಧ್ಯವೇ ಎಂದು ನಿಯೋಗದಲ್ಲಿದ್ದವರು ಪ್ರಶ್ನಿಸಿದರು.<br /> <br /> 20 ಮಂದಿಯ ಗುಂಪು ರಚಿಸಿ ಅವರಿಗೆ ಯಾಂತ್ರೀಕೃತ ದೋಣಿಗಳ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ, ಬಂಡವಾಳದ ಒಂದಿಷ್ಟು ಭಾಗವನ್ನು ಮಾತ್ರ ಮೀನುಗಾರರು ತೊಡಗಿಸಿದರೆ ಸಾಕು. ಈ ಪ್ರಸ್ತಾಪ ಒಪ್ಪಿಗೆಯಾದರೆ ಅದರ ಬಗ್ಗೆ ಶೀಘ್ರ ಕಾರ್ಯತಂತ್ರ ರೂಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.<br /> <br /> ಜಿಲ್ಲಾಡಳಿತ ನೀಡಿದ ಈ ಕೊಡುಗೆ ಮೀನುಗಾರರಿಗೆ ಒಪ್ಪಿಗೆಯಾಗುವಂತೆ ಕಂಡಿದ್ದು, ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರವುದಾಗಿ ಮೀನುಗಾರರು ತಿಳಿಸಿದರು.<br /> <br /> ಆದರೆ ಪರಿಹಾರ ಪ್ಯಾಕೇಜ್ಗೆ ಸ್ಪಷ್ಟ ರೂಪ ಸಿಗುವವರೆಗೆ ಎಂಎಸ್ಇಜೆಡ್ ಪೈಪ್ಲೈನ್ ಕಾಮಗಾರಿ ಆರಂಭಕ್ಕೆ ಅವಕಾಶ ನೀಡಲಾಗದು ಎಂದು ಮೀನುಗಾರರು ಸ್ಪಷ್ಟಪಡಿಸಿದರು.<br /> <br /> ನಿಯೋಗದಲ್ಲಿ ವಾಸುದೇವ್ ಜತೆ ವಾಮನ ಅಮೀನ್, ಯತೀಶ್ ಬೈಕಂಪಾಡಿ, ದಿನೇಶ್ ಪಣಂಬೂರು ಮತ್ತಿತರರು ಇದ್ದರು.<br /> <br /> ಎಂಎಸ್ಇಜೆಡ್ ಪೈಪ್ಲೈನ್ ಅಳವಡಿಸಲು ಕಳೆದ ಗುರುವಾರ ಬಾರ್ಜ್ ಮೇಲಿನ ಯಂತ್ರ ಸಿದ್ಧತೆ ನಡೆಸುತ್ತಿದ್ದಂತೆಯೇ ಹತ್ತಾರು ದೋಣಿ ಗಳಲ್ಲಿ ತೆರಳಿದ ಮೀನುಗಾರರು ತೀವ್ರ ಪ್ರತಿ ಭಟನೆ ನಡೆಸಿದ್ದರು. ಬೆಚ್ಚಿದ ಗುತ್ತಿಗೆ ದಾರರು ಯಂತ್ರ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>