ತಾಲ್ಲೂಕಿನ ಗೋಟೆ ಗ್ರಾಮದ ರೈತ ಚನ್ನಪ್ಪ ಅವರು ಅಡಿಕೆ ಮಾರಾಟ ಮಾಡಿ ₹ 7 ಲಕ್ಷವಿದ್ದ ಚೀಲದೊಂದಿಗೆ ಬ್ಯಾಂಕ್ಗೆ ಸೋಮವಾರ ಬಂದಿದ್ದರು. ₹ 2 ಲಕ್ಷವನ್ನು ತಮ್ಮ ಖಾತೆಗೆ ಜಮಾ ಮಾಡಿ ಉಳಿದ ₹ 5 ಲಕ್ಷವನ್ನು ಬೈಕ್ನ ಬ್ಯಾಗ್ನಲ್ಲಿ ಇರಿಸಿ, ಅದರ ಮೇಲೆ ಜರ್ಕಿನ್ ಹೊದಿಸಿ, ಬೈಕ್ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ. ಈ ವೇಳೆ ವಾಹನ ದಟ್ಟಣೆಯಾಗಿದ್ದರಿಂದ ಬೈಕ್ ನಿಲ್ಲಿಸಿ ಮುಂದೆ ಹೋಗಿದ್ದಾರೆ. ಇದೇ ಸಮಯದಲ್ಲಿ ಮೂವರು ಕಳ್ಳರು ಮಿಚಿನಂತೆ ಹಣದ ಚೀಲವನ್ನು ಎಗರಿಸಿದ್ದಾರೆ.