<p><strong>ದಾವಣಗೆರೆ: </strong>ನಗರದ ಗಾಂಧಿನಗರದಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಗೂಳಿಯೊಂದು ಜನರನ್ನು ಬೆದರಿಸಿ ಆತಂಕ ಸೃಷ್ಟಿಸಿತ್ತು.</p>.<p>ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಗೂಳಿ ರಸ್ತೆ ತುಂಬೆಲ್ಲಾ ಓಡಾಡಿತು. ಕಂಡ ಕಂಡವರಿಗೆ ಗುದ್ದಲು ಹೋಯಿತು. ಇದರಿಂದ ಗಾಬರಿಯಾದ ಜನರು ಮನೆಯೊಳಗೆ ಸೇರಿಕೊಂಡರು, ಕೆಲವರು ಮನೆಯ ಗೇಟಿನ ಬಾಗಿಲು ಹಾಕಿಕೊಂಡರು. ಕೆಲವರು ಕಿಟಕಿಯಲ್ಲಿ ನಿಂತು ಗೂಳಿಯ ಅಬ್ಬರ ವೀಕ್ಷಿಸಿದರು.</p>.<p>ಗಾಂಧಿನಗರ, ಆಜಾದ್ ನಗರ, ಅಹ್ಮದ್ ನಗರ ಸೇರಿ ಹಲವೆಡೆ ಅಬ್ಬರಿಸುತ್ತಾ ಓಡಾಡಿದ ಗೂಳಿ ಜನರಲ್ಲಿ ಭಯ ಉಂಟುಮಾಡಿತು. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು, ಯುವಕರು ಗೂಳಿ ಆರ್ಭಟಕ್ಕೆ ಹೆದರಿ ಓಡಿದರು.</p>.<p>ಗೂಳಿಯ ಆರ್ಭಟ ಜೋರಾಗುತ್ತಿದ್ದಂತೆ ಜನರು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಉಪಾಯ ಮಾಡಿ, ಕಚೇರಿಯೊಂದರ ಕಾಂಪೌಂಡ್ ಒಳಗೆ ನಿಂತು ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಗೂಳಿಯನ್ನು ಹಿಡಿದು ಜನರ ಆತಂಕ ದೂರ ಮಾಡಿದರು.ಯಾರಿಗೂ ಅಪಾಯವಾಗಿಲ್ಲ.</p>.<p>‘ಸಿಬ್ಬಂದಿ ಹರಸಾಹಸ ಪಟ್ಟು ಗೂಳಿಯನ್ನು ಹಿಡಿದರು. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಸಂಜೆಯವರೆಗೆ ಗೂಳಿಯನ್ನು ಕಟ್ಟಿ ಹಾಕಲಾಗಿತ್ತು. ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದ ಬಳಿಕಬಂದ ಪಶು ವೈದ್ಯರು ಗೂಳಿಯನ್ನು ಸಮೀಪದ ಗೋಶಾಲೆಗೆ ರವಾನಿಸಿದರು’ ಎಂದು ಗಾಂಧಿನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ನಗರದ ಗಾಂಧಿನಗರದಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಗೂಳಿಯೊಂದು ಜನರನ್ನು ಬೆದರಿಸಿ ಆತಂಕ ಸೃಷ್ಟಿಸಿತ್ತು.</p>.<p>ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಗೂಳಿ ರಸ್ತೆ ತುಂಬೆಲ್ಲಾ ಓಡಾಡಿತು. ಕಂಡ ಕಂಡವರಿಗೆ ಗುದ್ದಲು ಹೋಯಿತು. ಇದರಿಂದ ಗಾಬರಿಯಾದ ಜನರು ಮನೆಯೊಳಗೆ ಸೇರಿಕೊಂಡರು, ಕೆಲವರು ಮನೆಯ ಗೇಟಿನ ಬಾಗಿಲು ಹಾಕಿಕೊಂಡರು. ಕೆಲವರು ಕಿಟಕಿಯಲ್ಲಿ ನಿಂತು ಗೂಳಿಯ ಅಬ್ಬರ ವೀಕ್ಷಿಸಿದರು.</p>.<p>ಗಾಂಧಿನಗರ, ಆಜಾದ್ ನಗರ, ಅಹ್ಮದ್ ನಗರ ಸೇರಿ ಹಲವೆಡೆ ಅಬ್ಬರಿಸುತ್ತಾ ಓಡಾಡಿದ ಗೂಳಿ ಜನರಲ್ಲಿ ಭಯ ಉಂಟುಮಾಡಿತು. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು, ಯುವಕರು ಗೂಳಿ ಆರ್ಭಟಕ್ಕೆ ಹೆದರಿ ಓಡಿದರು.</p>.<p>ಗೂಳಿಯ ಆರ್ಭಟ ಜೋರಾಗುತ್ತಿದ್ದಂತೆ ಜನರು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಉಪಾಯ ಮಾಡಿ, ಕಚೇರಿಯೊಂದರ ಕಾಂಪೌಂಡ್ ಒಳಗೆ ನಿಂತು ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಗೂಳಿಯನ್ನು ಹಿಡಿದು ಜನರ ಆತಂಕ ದೂರ ಮಾಡಿದರು.ಯಾರಿಗೂ ಅಪಾಯವಾಗಿಲ್ಲ.</p>.<p>‘ಸಿಬ್ಬಂದಿ ಹರಸಾಹಸ ಪಟ್ಟು ಗೂಳಿಯನ್ನು ಹಿಡಿದರು. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಸಂಜೆಯವರೆಗೆ ಗೂಳಿಯನ್ನು ಕಟ್ಟಿ ಹಾಕಲಾಗಿತ್ತು. ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದ ಬಳಿಕಬಂದ ಪಶು ವೈದ್ಯರು ಗೂಳಿಯನ್ನು ಸಮೀಪದ ಗೋಶಾಲೆಗೆ ರವಾನಿಸಿದರು’ ಎಂದು ಗಾಂಧಿನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>