<p><strong>ದಾವಣಗೆರೆ:</strong> ಮುಳುಗಾಯಿ (ಬದನೆ) ಬೆಳೆಯಲು ಮಾಡಿದ ವೆಚ್ಚದಷ್ಟೂ ಬೆಲೆ ಸಿಕ್ಕಿಲ್ಲ ಎಂದು ನೊಂದ ರೈತರೊಬ್ಬರು ಅಷ್ಟೂ ಬೆಳೆಯನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಬುಧವಾರ ಕಳುಹಿಸಿಕೊಟ್ಟಿದ್ದಾರೆ.</p>.<p>ತಾಲ್ಲೂಕಿನ ರಾಂಪುರ ಗ್ರಾಮದ ರೈತರಾಜ್ಯ ರೈತ ಸಂಘದ ಉಪಾಧ್ಯಕ್ಷ ಆರ್.ಜಿ.ಬಸವರಾಜ ಅವರು ಎರಡು ಎಕರೆಯಲ್ಲಿ ಮುಳುಗಾಯಿ ಬೆಳೆದಿದ್ದರು. ಈಗ ಫಸಲು ಬಂದಿದೆ. ಕೊಯ್ದು ಮಾರುಕಟ್ಟೆಗೆ ಒಯ್ದರೆ ಕೆ.ಜಿ.ಗೆ ₹ 2ರಂತೆ ಕೇಳಿದ್ದರು. ಕೆ.ಜಿ.ಗೆ ಕನಿಷ್ಠ ₹ 10 ಸಿಗದೇ ಇದ್ದರೆ ಅಸಲು ಕೂಡ ಸಿಗುವುದಿಲ್ಲ ಎಂದು ಮಾರಾಟ ಮಾಡದೇ ವಾಪಸ್ಸಾದ ಬಸವರಾಜ್ ಅವರು ಧರ್ಮಸ್ಥಳಕ್ಕೆ ನೀಡಲು ನಿರ್ಧರಿಸಿದರು. ಹೆತ್ತವರಾದ ಆರ್.ಜಿ.ಚಂದ್ರಪ್ಪ, ಸರೋಜಮ್ಮ, ಸಹೋದರರಾದ ಆರ್.ಜಿ.ಹನುಮಂತಗೌಡ, ಆರ್.ಜಿ.ಮುನಿಕುಮಾರ, ಅತ್ತಿಗೆ, ಪತ್ನಿ ಜತೆ ಚರ್ಚಿಸಿ ಬುಧವಾರ ರಾತ್ರಿಯೇ ಲಾರಿ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ 4 ಟನ್ ಮುಳುಗಾಯಿ ಜತೆಗೆ ಸುತ್ತಮುತ್ತಲಿನ ರೈತರೂ ಕೈಜೋಡಿಸಿದ್ದರಿಂದ 5 ಟನ್ ಮುಳುಗಾಯಿಯಾಗಿದೆ.</p>.<p>‘ನಮ್ಮ ಕೈಯಿಂದ ₹ 2ಕ್ಕೆ ಕೇಳುವ ವ್ಯಾಪಾರಸ್ಥರು, ಕಣ್ಣಮುಂದೆಯೇ ಕೆ.ಜಿ.ಗೆ ₹ 20ಕ್ಕೆ ಮಾರಾಟ ಮಾಡುತ್ತಾರೆ. 8-10 ಕೂಲಿಕಾರರನ್ನು ಇಟ್ಟು ಕಿತ್ತಿರುವ ವೆಚ್ಚವೂ ಬರುವುದಿಲ್ಲ. ಮಂಜುನಾಥನ ಕ್ಷೇತ್ರಕ್ಕೆ ಬಂದವರಾದರೂ ತಿನ್ನಲಿ ಎಂದು ನಾವೇ ₹ 9 ಸಾವಿರಕ್ಕೆ ಲಾರಿ ಮಾಡಿ, ಅದಕ್ಕೆ ಲೋಡ್ ಮಾಡಿ ಕಳುಹಿಸಿದ್ದೇವೆ’ ಎಂದು ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಮುಳುಗಾಯಿ (ಬದನೆ) ಬೆಳೆಯಲು ಮಾಡಿದ ವೆಚ್ಚದಷ್ಟೂ ಬೆಲೆ ಸಿಕ್ಕಿಲ್ಲ ಎಂದು ನೊಂದ ರೈತರೊಬ್ಬರು ಅಷ್ಟೂ ಬೆಳೆಯನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಬುಧವಾರ ಕಳುಹಿಸಿಕೊಟ್ಟಿದ್ದಾರೆ.</p>.<p>ತಾಲ್ಲೂಕಿನ ರಾಂಪುರ ಗ್ರಾಮದ ರೈತರಾಜ್ಯ ರೈತ ಸಂಘದ ಉಪಾಧ್ಯಕ್ಷ ಆರ್.ಜಿ.ಬಸವರಾಜ ಅವರು ಎರಡು ಎಕರೆಯಲ್ಲಿ ಮುಳುಗಾಯಿ ಬೆಳೆದಿದ್ದರು. ಈಗ ಫಸಲು ಬಂದಿದೆ. ಕೊಯ್ದು ಮಾರುಕಟ್ಟೆಗೆ ಒಯ್ದರೆ ಕೆ.ಜಿ.ಗೆ ₹ 2ರಂತೆ ಕೇಳಿದ್ದರು. ಕೆ.ಜಿ.ಗೆ ಕನಿಷ್ಠ ₹ 10 ಸಿಗದೇ ಇದ್ದರೆ ಅಸಲು ಕೂಡ ಸಿಗುವುದಿಲ್ಲ ಎಂದು ಮಾರಾಟ ಮಾಡದೇ ವಾಪಸ್ಸಾದ ಬಸವರಾಜ್ ಅವರು ಧರ್ಮಸ್ಥಳಕ್ಕೆ ನೀಡಲು ನಿರ್ಧರಿಸಿದರು. ಹೆತ್ತವರಾದ ಆರ್.ಜಿ.ಚಂದ್ರಪ್ಪ, ಸರೋಜಮ್ಮ, ಸಹೋದರರಾದ ಆರ್.ಜಿ.ಹನುಮಂತಗೌಡ, ಆರ್.ಜಿ.ಮುನಿಕುಮಾರ, ಅತ್ತಿಗೆ, ಪತ್ನಿ ಜತೆ ಚರ್ಚಿಸಿ ಬುಧವಾರ ರಾತ್ರಿಯೇ ಲಾರಿ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ 4 ಟನ್ ಮುಳುಗಾಯಿ ಜತೆಗೆ ಸುತ್ತಮುತ್ತಲಿನ ರೈತರೂ ಕೈಜೋಡಿಸಿದ್ದರಿಂದ 5 ಟನ್ ಮುಳುಗಾಯಿಯಾಗಿದೆ.</p>.<p>‘ನಮ್ಮ ಕೈಯಿಂದ ₹ 2ಕ್ಕೆ ಕೇಳುವ ವ್ಯಾಪಾರಸ್ಥರು, ಕಣ್ಣಮುಂದೆಯೇ ಕೆ.ಜಿ.ಗೆ ₹ 20ಕ್ಕೆ ಮಾರಾಟ ಮಾಡುತ್ತಾರೆ. 8-10 ಕೂಲಿಕಾರರನ್ನು ಇಟ್ಟು ಕಿತ್ತಿರುವ ವೆಚ್ಚವೂ ಬರುವುದಿಲ್ಲ. ಮಂಜುನಾಥನ ಕ್ಷೇತ್ರಕ್ಕೆ ಬಂದವರಾದರೂ ತಿನ್ನಲಿ ಎಂದು ನಾವೇ ₹ 9 ಸಾವಿರಕ್ಕೆ ಲಾರಿ ಮಾಡಿ, ಅದಕ್ಕೆ ಲೋಡ್ ಮಾಡಿ ಕಳುಹಿಸಿದ್ದೇವೆ’ ಎಂದು ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>