‘ಎಲ್ಲರೂ ಸಂಘಟಿತರಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಂಚಿಕೊಳ್ಳಲು ಯುಗಾದಿ ಸಂಭ್ರಮ ಆಚರಿಸಲಾಯಿತು. ಯುಗಾದಿ ವಿಶೇಷತೆ ಬಗ್ಗೆ ಸುಧಮ್ಮ ವಿವರಿಸಿದರು. ಕನ್ನಡ ಹಾಡುಗಳಿಗೆ ರೋಚನಾ ಕಾಂತೇಶ್, ಧೃತಿ ಪ್ರಶಾಂತ್, ಧೃವ ಪ್ರಶಾಂತ್, ವಾಗ್ಮಿ ಮಂಜುನಾಥ್, ಆಧ್ಯಾ ರೇವಣ ಸಿದ್ದು ನೃತ್ಯ ಮಾಡಿದರು. ಜಾನಪದ ಗೀತೆ, ಶ್ಲೋಕ ಹಾಗೂ ಭಾವ ಗೀತೆಗಳನ್ನು ಸುಧಾ, ದಿಶಾ, ದಿವ್ಯಾ ಭಟ್, ನಂದಿನಿ ಹಾಡಿದರು. ನಾಗಲಾಂಬಿಕಾ ಪಾತ್ರಾಭಿನಯ ಮಾಡಿದರು. ಹನುಮಾನ್, ರಾಮನ ವೇಷಧಾರಿಗಳು ಗಮನ ಸೆಳೆದರು. ಪುನೀತ್ ರಾಜ್ಕುಮಾರ್ ಅಭಿನಯದ ಬೊಂಬೆ ಹೇಳುತೈತೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲಾಯಿತು’ ಎಂದು ಅವರು ವಿವರಿಸಿದರು. ಚೈತ್ರ ಹಾಗೂ ಚಂದನಾ ಕಾರ್ಯಕ್ರಮ ನಿರೂಪಿಸಿದರು.