<p><strong>ಅರಸೀಕೆರೆ (ಉಚ್ಚಂಗಿದುರ್ಗ):</strong> ಚಿತ್ರ ನಟ ಸುದೀಪ್ ಅವರ ಜನ್ಮದಿನದ ಅಂಗವಾಗಿ ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದಿಂದ ಅರಸೀಕೆರೆಯ ಶಾಂತ ಪ್ರಕಾಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ.</p>.<p>₹ 15 ಸಾವಿರ ವೆಚ್ಚ ಮಾಡಿ 8 ಅಭಿಮಾನಿಗಳು ಶಾಲೆಗೆ ಬಣ್ಣ ಬಳಿದಿದ್ದು, ಶಾಲೆಗೆ ಮೆರುಗು ಬಂದಿದೆ.</p>.<p>ಶನಿವಾರ ನಡೆದ ಕಾರ್ಯಕ್ರಮವನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ನವೀನ್ ಗೌಡ, ಉಪಾಧ್ಯಕ್ಷ ಜಗದೀಶ್ ಉದ್ಘಾಟಿಸಿದರು.</p>.<p>ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ.ಡಿ. ಅಣ್ಣಪ್ಪ</p>.<p>ಅವರ ಪುತ್ರರು ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಅನ್ನ ಸಂತರ್ಪಣೆಯೂ ನಡೆಯಿತು.</p>.<p>ಹಾದಿಮನೆ ಸಂತೋಷ್, ಚಂದನ, ಮಿಂಚು, ಪ್ರೀತಮ್, ಸಾನ್ವಿ, ಪ್ರಶಾಂತ್ ಪಾಟೀಲ್, ಫಣಿಯಾಪುರ ಲಿಂಗರಾಜ, ಕೆಂಚನಗೌಡ, ಕೊಟ್ರೇಶ್, ನವೀನ್, ಶಶಿ, ಪರಸಪ್ಪ, ಮರಿಯಪ್ಪ ಇದ್ದರು.</p>.<p>ಆಯ್ಕೆ: ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅರಸೀಕೆರೆ ಗ್ರಾಮದ ಹಾದಿಮನೆ ಸಂತೋಷ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ (ಉಚ್ಚಂಗಿದುರ್ಗ):</strong> ಚಿತ್ರ ನಟ ಸುದೀಪ್ ಅವರ ಜನ್ಮದಿನದ ಅಂಗವಾಗಿ ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದಿಂದ ಅರಸೀಕೆರೆಯ ಶಾಂತ ಪ್ರಕಾಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ.</p>.<p>₹ 15 ಸಾವಿರ ವೆಚ್ಚ ಮಾಡಿ 8 ಅಭಿಮಾನಿಗಳು ಶಾಲೆಗೆ ಬಣ್ಣ ಬಳಿದಿದ್ದು, ಶಾಲೆಗೆ ಮೆರುಗು ಬಂದಿದೆ.</p>.<p>ಶನಿವಾರ ನಡೆದ ಕಾರ್ಯಕ್ರಮವನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ನವೀನ್ ಗೌಡ, ಉಪಾಧ್ಯಕ್ಷ ಜಗದೀಶ್ ಉದ್ಘಾಟಿಸಿದರು.</p>.<p>ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ.ಡಿ. ಅಣ್ಣಪ್ಪ</p>.<p>ಅವರ ಪುತ್ರರು ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಅನ್ನ ಸಂತರ್ಪಣೆಯೂ ನಡೆಯಿತು.</p>.<p>ಹಾದಿಮನೆ ಸಂತೋಷ್, ಚಂದನ, ಮಿಂಚು, ಪ್ರೀತಮ್, ಸಾನ್ವಿ, ಪ್ರಶಾಂತ್ ಪಾಟೀಲ್, ಫಣಿಯಾಪುರ ಲಿಂಗರಾಜ, ಕೆಂಚನಗೌಡ, ಕೊಟ್ರೇಶ್, ನವೀನ್, ಶಶಿ, ಪರಸಪ್ಪ, ಮರಿಯಪ್ಪ ಇದ್ದರು.</p>.<p>ಆಯ್ಕೆ: ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅರಸೀಕೆರೆ ಗ್ರಾಮದ ಹಾದಿಮನೆ ಸಂತೋಷ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>