<p><strong>ದಾವಣಗೆರೆ</strong>: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಅನುಕೂಲಗಳು ಇರಲಿಲ್ಲ. ಬದಲಾಗಿ ಅಸಿಸ್ಟೆಂಟ್ ಕಮೀಷನರ್ಗಳಿಗೆ ಹಣ ವಸೂಲಿ ಮಾಡಿಕೊಳ್ಳುವ ದಂಧೆಯಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಯಿತು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಮರ್ಥಿಸಿಕೊಂಡರು.</p>.<p>ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಗ್ಗೆ ಜನರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ತರುವ ತೀರ್ಮಾನ ಕೈಗೊಳ್ಳಲಾಯಿತು. 5 ಗುಂಟೆ ಜಮೀನು ಖರೀದಿ ಮಾಡಿದರೆ ಎರಡು ಮೂರು ತಿಂಗಳಲ್ಲಿ ನೋಟಿಸ್ ಕೊಡುತ್ತಿದ್ದರು. ಅಲ್ಲದೇ 79 ಎ, 79ಬಿ ಅಡಿಯಲ್ಲಿ ಒಂದು ಗುಂಟೆ ಸರ್ಕಾರ ವಶಪಡಿಸಿಕೊಂಡ ನಿದರ್ಶನಗಳು ಇಲ್ಲ. ಈ ಕಾಯ್ದೆ ಉಪಯೋಗವಿರಲಿಲ್ಲ. ಹಾಗಾಗಿಯೇ ಇದು ಒಳ್ಳೆಯ ನಿರ್ಧಾರ’ ಎಂದರು.</p>.<p>‘ತಮಿಳುನಾಡು, ತೆಲಂಗಾಲ ಹಾಗೂ ಆಂಧ್ರಪ್ರದೇಶ ಸೇರಿ ಯಾವ ರಾಜ್ಯದಲ್ಲೂ ಈ ಕಾಯ್ದೆ ಇಲ್ಲ. ರಾಜ್ಯದಲ್ಲಿ ಮಾತ್ರ ಇತ್ತು. ಹಾಗಾಗಿ ಸಮಸ್ಯೆ ಇಲ್ಲ’ ಎಂದು ಮತ್ತೊಬ್ಬ ಸಚಿವ ಬೈರತಿ ಬಸವರಾಜ್ ಸಮರ್ಥಿಸಿಕೊಂಡದರು.</p>.<p>ವಿಧಾನಪರಿಷತ್ ಸದಸ್ಯ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂ.ಟಿ.ಬಿ. ನಾಗರಾಜ್ ಒಬ್ಬರಿಗೆ ಅಲ್ಲ. ಎಚ್.ವಿಶ್ವನಾಥ್, ಆರ್.ಶಂಕರ್ ಹಾಗೂ ರೋಷನ್ಬೇಗ್ ಅವರಿಗೂ ವಿಧಾನಪರಿತ್ಗೆ ಟಿಕೆಟ್ ನೀಡಬೇಕು’ ಎಂದು ಎಸ್.ಟಿ. ಸೋಮಶೇಖರ್ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಅನುಕೂಲಗಳು ಇರಲಿಲ್ಲ. ಬದಲಾಗಿ ಅಸಿಸ್ಟೆಂಟ್ ಕಮೀಷನರ್ಗಳಿಗೆ ಹಣ ವಸೂಲಿ ಮಾಡಿಕೊಳ್ಳುವ ದಂಧೆಯಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಯಿತು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಮರ್ಥಿಸಿಕೊಂಡರು.</p>.<p>ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಗ್ಗೆ ಜನರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ತರುವ ತೀರ್ಮಾನ ಕೈಗೊಳ್ಳಲಾಯಿತು. 5 ಗುಂಟೆ ಜಮೀನು ಖರೀದಿ ಮಾಡಿದರೆ ಎರಡು ಮೂರು ತಿಂಗಳಲ್ಲಿ ನೋಟಿಸ್ ಕೊಡುತ್ತಿದ್ದರು. ಅಲ್ಲದೇ 79 ಎ, 79ಬಿ ಅಡಿಯಲ್ಲಿ ಒಂದು ಗುಂಟೆ ಸರ್ಕಾರ ವಶಪಡಿಸಿಕೊಂಡ ನಿದರ್ಶನಗಳು ಇಲ್ಲ. ಈ ಕಾಯ್ದೆ ಉಪಯೋಗವಿರಲಿಲ್ಲ. ಹಾಗಾಗಿಯೇ ಇದು ಒಳ್ಳೆಯ ನಿರ್ಧಾರ’ ಎಂದರು.</p>.<p>‘ತಮಿಳುನಾಡು, ತೆಲಂಗಾಲ ಹಾಗೂ ಆಂಧ್ರಪ್ರದೇಶ ಸೇರಿ ಯಾವ ರಾಜ್ಯದಲ್ಲೂ ಈ ಕಾಯ್ದೆ ಇಲ್ಲ. ರಾಜ್ಯದಲ್ಲಿ ಮಾತ್ರ ಇತ್ತು. ಹಾಗಾಗಿ ಸಮಸ್ಯೆ ಇಲ್ಲ’ ಎಂದು ಮತ್ತೊಬ್ಬ ಸಚಿವ ಬೈರತಿ ಬಸವರಾಜ್ ಸಮರ್ಥಿಸಿಕೊಂಡದರು.</p>.<p>ವಿಧಾನಪರಿಷತ್ ಸದಸ್ಯ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂ.ಟಿ.ಬಿ. ನಾಗರಾಜ್ ಒಬ್ಬರಿಗೆ ಅಲ್ಲ. ಎಚ್.ವಿಶ್ವನಾಥ್, ಆರ್.ಶಂಕರ್ ಹಾಗೂ ರೋಷನ್ಬೇಗ್ ಅವರಿಗೂ ವಿಧಾನಪರಿತ್ಗೆ ಟಿಕೆಟ್ ನೀಡಬೇಕು’ ಎಂದು ಎಸ್.ಟಿ. ಸೋಮಶೇಖರ್ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>