<p><strong>ದಾವಣಗೆರೆ</strong>: ‘ವೀರೇಶ್ವರ ಪುಣ್ಯಾಶ್ರಮದಲ್ಲಿ ಜಾತಿ ತಾರತಮ್ಯವಿಲ್ಲದೇ ಎಲ್ಲಾ ಸಮುದಾಯಗಳ ಮಕ್ಕಳಿಗೂ ಸಂಗೀತ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳು ನೀಡುವ ಒಂದು ರೂಪಾಯಿಯೂ ವ್ಯರ್ಥವಾಗುವುದಿಲ್ಲ. ದಾನದ ಹಣವನ್ನು ಅಂಧ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಬಳಸುತ್ತಿದ್ದೇವೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು. </p>.<p>ಇಲ್ಲಿನ ಬಾಡ ಕ್ರಾಸ್ ಬಳಿ ಇರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೆ ಮತ್ತು ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>‘ವೀರೇಶ್ವರ ಪುಣ್ಯಾಶ್ರಮದಲ್ಲಿ 48 ಅಂಧ ಮಕ್ಕಳು ಸಂಗೀತ ಶಿಕ್ಷಣ ಕಲಿಯುತ್ತಿದ್ದಾರೆ. ಆ ಸಂಖ್ಯೆ 100 ಕ್ಕೆ ಏರಬೇಕು. ಸಂಗೀತ ಕಲಿಯುವ ಆಸೆಯೊಂದಿಗೆ ಬರುವ ಯಾವ ಅಂಧ ವಿದ್ಯಾರ್ಥಿಗೂ ಶಿಕ್ಷಣ ನಿರಾಕರಿಸುವುದಿಲ್ಲ’ ಎಂದರು. </p>.<p>‘ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಆಶ್ರಮದ ಅಭಿವೃದ್ಧಿಯೇ ಗುರಿಯಾಗಿತ್ತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಪುಣ್ಯಾಶ್ರಮವು ಗುರುತಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶ್ರಮವಹಿಸಿದೆ. ಆಶ್ರಮದ ಅಭಿವೃದ್ಧಿಗಾಗಿ ಯಾರ ಬಳಿಯೂ ದಾನ ಕೇಳುವುದಿಲ್ಲ. ಜನರೇ ಸ್ವಯಂಪ್ರೇರಿತವಾಗಿ ದಾನ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. </p>.<p>‘ಬೆಂಗಳೂರಿನ ವಕೀಲೆ ಅಕ್ಕಮಹಾದೇವಿ ಎಂಬುವರು ಪುಣ್ಯಾಶ್ರಮಕ್ಕೆ ₹ 25 ಲಕ್ಷ ದಾನ ನೀಡಿದ್ದಾರೆ. ವಿಲ್ನಲ್ಲಿ ಅವರಿಗೆ ಸೇರಿದ ನಿವೇಶನವೊಂದನ್ನು ಪುಣ್ಯಾಶ್ರಮದ ಹೆಸರಿಗೆ ಬರೆದಿರುವುದು ಅವರ ಮರಣದ ಬಳಿಕ ತಿಳಿಯಿತು’ ಎಂದರು. </p>.<p>‘ರಾಜ್ಯ, ರಾಷ್ಟ್ರಮಟ್ಟದಲ್ಲಿ ಎಷ್ಟೇ ಪ್ರಶಸ್ತಿ ಬಂದರೂ, ನಾನು ಒಡನಾಡಿದ ಇಲ್ಲಿನ ಪುಣ್ಯಾಶ್ರಮ ನೀಡುವ ಗೌರವವೇ ಶ್ರೇಷ್ಠ’ ಎಂದು ರಂಗಭೂಮಿ ಕಲಾವಿದ ಚಿಂದೋಡಿ ಬಂಗಾರೇಶ್ ಹೇಳಿದರು. </p>.<p>‘ಅಂಧ ಅನಾಥರ, ದೀನ ದಲಿತರ ಸೇವೆಯ ಪರಮ ಸುಖ ಎಂದು ಪಂಚಾಕ್ಷರಿ ಗವಾಯಿ ಹೇಳಿದ್ದರು. ಸಮಾಜ ನಿನಗೆ ಏನು ಕೊಟ್ಟಿತು ಎಂಬುದು ಮುಖ್ಯವಲ್ಲ, ಸಮಾಜಕ್ಕೆ ನೀನು ಏನು ಕೊಟ್ಟೆ ಎಂಬುದು ಮುಖ್ಯ’ ಎಂದರು. </p>.<p>ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. </p>.<p>ಪುಣ್ಯಾಶ್ರಮದ ಉಪಾಧ್ಯಕ್ಷ ದೇವರಮನಿ ಶಿವಕುಮಾರ, ಖಜಾಂಚಿ ಎಸ್.ಕೆ.ವೀರಣ್ಣ, ಟ್ರಸ್ಟಿಗಳಾದ ಜಿ.ಎಚ್.ಯಲ್ಲಪ್ಪ, ಎಸ್.ಜಿ.ಉಳವಯ್ಯ, ಎ.ಕೆ.ಪ್ರಶಾಂತ್, ದೇವರಮನಿ ಶಿವರಾಜ್, ಪ್ರಮುಖರಾದ ಮಹಾಲಿಂಗಪ್ಪ, ವೀರಭದ್ರಪ್ಪ, ವೇದಮೂರ್ತಿ, ರಮೇಶ್ ಧನ್ನೂರು, ಅಮರೇಶ ಶಾಸ್ತ್ರಿ, ಕುರ್ಕಿ ಮಂಜುನಾಥ್, ಸಿದ್ದಲಿಂಗಸ್ವಾಮಿ ಹಾಗೂ ಇನ್ನಿತರರಿದ್ದರು.</p>.<p><strong>‘ಅಂಧರಿಗೆ ಬದುಕು ಕಟ್ಟಿಕೊಟ್ಟರು’</strong></p><p>‘ಅಂಧತ್ವ ಇರುವವರು ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ಅಂಧರಿಗೆ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಪಂಚಾಕ್ಷರಿ ಗವಾಯಿ ಪುಟ್ಟರಾಜ ಕವಿ ಗವಾಯಿ ಅವರು ಮಾಡಿದ್ದಾರೆ’ ಎಂದು ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಹೇಳಿದರು.</p><p>‘ಸನಾತನ ಭಾರತದ ಪರಂಪರೆಯಲ್ಲಿ ನಾಗರಿಕತೆಗಿಂತಲೂ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂವಿಧಾನಬದ್ಧವಾಗಿ ಚೆನ್ನಾಗಿ ಬದುಕುವುದು ನಾಗರಿಕತೆಯಾದರೆ ಇನ್ನೊಬ್ಬರಿಗೂ ಬದುಕಟ್ಟು ಕಟ್ಟಿಕೊಡುವುದು ಸಂಸ್ಕೃತಿಯಾಗಿದೆ. ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ವೀರೇಶ್ವರ ಪುಣ್ಯಾಶ್ರಮದಲ್ಲಿ ಜಾತಿ ತಾರತಮ್ಯವಿಲ್ಲದೇ ಎಲ್ಲಾ ಸಮುದಾಯಗಳ ಮಕ್ಕಳಿಗೂ ಸಂಗೀತ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳು ನೀಡುವ ಒಂದು ರೂಪಾಯಿಯೂ ವ್ಯರ್ಥವಾಗುವುದಿಲ್ಲ. ದಾನದ ಹಣವನ್ನು ಅಂಧ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಬಳಸುತ್ತಿದ್ದೇವೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು. </p>.<p>ಇಲ್ಲಿನ ಬಾಡ ಕ್ರಾಸ್ ಬಳಿ ಇರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೆ ಮತ್ತು ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>‘ವೀರೇಶ್ವರ ಪುಣ್ಯಾಶ್ರಮದಲ್ಲಿ 48 ಅಂಧ ಮಕ್ಕಳು ಸಂಗೀತ ಶಿಕ್ಷಣ ಕಲಿಯುತ್ತಿದ್ದಾರೆ. ಆ ಸಂಖ್ಯೆ 100 ಕ್ಕೆ ಏರಬೇಕು. ಸಂಗೀತ ಕಲಿಯುವ ಆಸೆಯೊಂದಿಗೆ ಬರುವ ಯಾವ ಅಂಧ ವಿದ್ಯಾರ್ಥಿಗೂ ಶಿಕ್ಷಣ ನಿರಾಕರಿಸುವುದಿಲ್ಲ’ ಎಂದರು. </p>.<p>‘ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಆಶ್ರಮದ ಅಭಿವೃದ್ಧಿಯೇ ಗುರಿಯಾಗಿತ್ತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಪುಣ್ಯಾಶ್ರಮವು ಗುರುತಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶ್ರಮವಹಿಸಿದೆ. ಆಶ್ರಮದ ಅಭಿವೃದ್ಧಿಗಾಗಿ ಯಾರ ಬಳಿಯೂ ದಾನ ಕೇಳುವುದಿಲ್ಲ. ಜನರೇ ಸ್ವಯಂಪ್ರೇರಿತವಾಗಿ ದಾನ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. </p>.<p>‘ಬೆಂಗಳೂರಿನ ವಕೀಲೆ ಅಕ್ಕಮಹಾದೇವಿ ಎಂಬುವರು ಪುಣ್ಯಾಶ್ರಮಕ್ಕೆ ₹ 25 ಲಕ್ಷ ದಾನ ನೀಡಿದ್ದಾರೆ. ವಿಲ್ನಲ್ಲಿ ಅವರಿಗೆ ಸೇರಿದ ನಿವೇಶನವೊಂದನ್ನು ಪುಣ್ಯಾಶ್ರಮದ ಹೆಸರಿಗೆ ಬರೆದಿರುವುದು ಅವರ ಮರಣದ ಬಳಿಕ ತಿಳಿಯಿತು’ ಎಂದರು. </p>.<p>‘ರಾಜ್ಯ, ರಾಷ್ಟ್ರಮಟ್ಟದಲ್ಲಿ ಎಷ್ಟೇ ಪ್ರಶಸ್ತಿ ಬಂದರೂ, ನಾನು ಒಡನಾಡಿದ ಇಲ್ಲಿನ ಪುಣ್ಯಾಶ್ರಮ ನೀಡುವ ಗೌರವವೇ ಶ್ರೇಷ್ಠ’ ಎಂದು ರಂಗಭೂಮಿ ಕಲಾವಿದ ಚಿಂದೋಡಿ ಬಂಗಾರೇಶ್ ಹೇಳಿದರು. </p>.<p>‘ಅಂಧ ಅನಾಥರ, ದೀನ ದಲಿತರ ಸೇವೆಯ ಪರಮ ಸುಖ ಎಂದು ಪಂಚಾಕ್ಷರಿ ಗವಾಯಿ ಹೇಳಿದ್ದರು. ಸಮಾಜ ನಿನಗೆ ಏನು ಕೊಟ್ಟಿತು ಎಂಬುದು ಮುಖ್ಯವಲ್ಲ, ಸಮಾಜಕ್ಕೆ ನೀನು ಏನು ಕೊಟ್ಟೆ ಎಂಬುದು ಮುಖ್ಯ’ ಎಂದರು. </p>.<p>ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. </p>.<p>ಪುಣ್ಯಾಶ್ರಮದ ಉಪಾಧ್ಯಕ್ಷ ದೇವರಮನಿ ಶಿವಕುಮಾರ, ಖಜಾಂಚಿ ಎಸ್.ಕೆ.ವೀರಣ್ಣ, ಟ್ರಸ್ಟಿಗಳಾದ ಜಿ.ಎಚ್.ಯಲ್ಲಪ್ಪ, ಎಸ್.ಜಿ.ಉಳವಯ್ಯ, ಎ.ಕೆ.ಪ್ರಶಾಂತ್, ದೇವರಮನಿ ಶಿವರಾಜ್, ಪ್ರಮುಖರಾದ ಮಹಾಲಿಂಗಪ್ಪ, ವೀರಭದ್ರಪ್ಪ, ವೇದಮೂರ್ತಿ, ರಮೇಶ್ ಧನ್ನೂರು, ಅಮರೇಶ ಶಾಸ್ತ್ರಿ, ಕುರ್ಕಿ ಮಂಜುನಾಥ್, ಸಿದ್ದಲಿಂಗಸ್ವಾಮಿ ಹಾಗೂ ಇನ್ನಿತರರಿದ್ದರು.</p>.<p><strong>‘ಅಂಧರಿಗೆ ಬದುಕು ಕಟ್ಟಿಕೊಟ್ಟರು’</strong></p><p>‘ಅಂಧತ್ವ ಇರುವವರು ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ಅಂಧರಿಗೆ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಪಂಚಾಕ್ಷರಿ ಗವಾಯಿ ಪುಟ್ಟರಾಜ ಕವಿ ಗವಾಯಿ ಅವರು ಮಾಡಿದ್ದಾರೆ’ ಎಂದು ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಹೇಳಿದರು.</p><p>‘ಸನಾತನ ಭಾರತದ ಪರಂಪರೆಯಲ್ಲಿ ನಾಗರಿಕತೆಗಿಂತಲೂ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂವಿಧಾನಬದ್ಧವಾಗಿ ಚೆನ್ನಾಗಿ ಬದುಕುವುದು ನಾಗರಿಕತೆಯಾದರೆ ಇನ್ನೊಬ್ಬರಿಗೂ ಬದುಕಟ್ಟು ಕಟ್ಟಿಕೊಡುವುದು ಸಂಸ್ಕೃತಿಯಾಗಿದೆ. ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>