ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಡಿಕ್ಕಿ: ಬೈಕ್‌ ಹಿಂಬದಿ ಸವಾರ ಸಾವು

Last Updated 23 ಜನವರಿ 2020, 16:17 IST
ಅಕ್ಷರ ಗಾತ್ರ

ದಾವಣಗೆರೆ: ಬೈಕ್‌ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್‌ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ಜಿ. ಶಂಭುಲಿಂಗಪ್ಪ (55) ಮೃತಪಟ್ಟವರು. ಅವರ ಮಗ ಜಿ.ಎಸ್‌. ವಿನಾಯಕ (25) ಗಾಯಗೊಂಡವರು. ವಿನಾಯಕ ಬೈಕಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು ಬುಧವಾರ ಸಂಜೆ ದಾವಣಗೆರೆಗೆ ಬಂದಿದ್ದರು. ಬಾಪೂಜಿ ಸಮುದಾಯ ಭವನದ ಬಳಿ ಇರುವ ಸ್ಮಾರ್ಟ ಸಿಟಿ ಆಫೀಸ್ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿದೆ. ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ಕಳವು

ದಾವಣಗೆರೆ: ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು ₹ 1.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 3,500 ನಗದು ಕಳವು ಮಾಡಿದ್ದಾರೆ.

ಇಲ್ಲಿನ ರಾಜೀವ್‌ಗಾಂಧಿ ಬಡಾವಣೆಯ ಶರಣಪ್ಪ ಬುಧವಾರ ಮಧ್ಯಾಹ್ನದ ಬಳಿಕ ಚಕ್ಕುಲಿ, ಖಾರಾ ಮಾರಾಟ ಮಾಡಲು ಹೋಗಿದ್ದರು. ಅವರ ಮಗ ಮಂಜುನಾಥ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಖಾರಾ, ಚಕ್ಕಲಿ ತಯಾರಿಸಲು ಹೋಗಿದ್ದ. ಇದೇ ಸಂದರ್ಭದಲ್ಲಿ ಒಳ ಕಳ್ಳರು ಒಳ ನುಗ್ಗಿ ಕಳವು ಮಾಡಿದ್ದಾರೆ. ಮಂಜುನಾಥ ನೀಡಿದ ದೂರಿನಂತೆ ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT