<p><strong>ದಾವಣಗೆರೆ: </strong>ಬೈಕ್ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ಜಿ. ಶಂಭುಲಿಂಗಪ್ಪ (55) ಮೃತಪಟ್ಟವರು. ಅವರ ಮಗ ಜಿ.ಎಸ್. ವಿನಾಯಕ (25) ಗಾಯಗೊಂಡವರು. ವಿನಾಯಕ ಬೈಕಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು ಬುಧವಾರ ಸಂಜೆ ದಾವಣಗೆರೆಗೆ ಬಂದಿದ್ದರು. ಬಾಪೂಜಿ ಸಮುದಾಯ ಭವನದ ಬಳಿ ಇರುವ ಸ್ಮಾರ್ಟ ಸಿಟಿ ಆಫೀಸ್ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿದೆ. ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಹಾಡಹಗಲೇ ಕಳವು</strong></p>.<p>ದಾವಣಗೆರೆ: ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು ₹ 1.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 3,500 ನಗದು ಕಳವು ಮಾಡಿದ್ದಾರೆ.</p>.<p>ಇಲ್ಲಿನ ರಾಜೀವ್ಗಾಂಧಿ ಬಡಾವಣೆಯ ಶರಣಪ್ಪ ಬುಧವಾರ ಮಧ್ಯಾಹ್ನದ ಬಳಿಕ ಚಕ್ಕುಲಿ, ಖಾರಾ ಮಾರಾಟ ಮಾಡಲು ಹೋಗಿದ್ದರು. ಅವರ ಮಗ ಮಂಜುನಾಥ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಖಾರಾ, ಚಕ್ಕಲಿ ತಯಾರಿಸಲು ಹೋಗಿದ್ದ. ಇದೇ ಸಂದರ್ಭದಲ್ಲಿ ಒಳ ಕಳ್ಳರು ಒಳ ನುಗ್ಗಿ ಕಳವು ಮಾಡಿದ್ದಾರೆ. ಮಂಜುನಾಥ ನೀಡಿದ ದೂರಿನಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಬೈಕ್ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ಜಿ. ಶಂಭುಲಿಂಗಪ್ಪ (55) ಮೃತಪಟ್ಟವರು. ಅವರ ಮಗ ಜಿ.ಎಸ್. ವಿನಾಯಕ (25) ಗಾಯಗೊಂಡವರು. ವಿನಾಯಕ ಬೈಕಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು ಬುಧವಾರ ಸಂಜೆ ದಾವಣಗೆರೆಗೆ ಬಂದಿದ್ದರು. ಬಾಪೂಜಿ ಸಮುದಾಯ ಭವನದ ಬಳಿ ಇರುವ ಸ್ಮಾರ್ಟ ಸಿಟಿ ಆಫೀಸ್ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿದೆ. ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಹಾಡಹಗಲೇ ಕಳವು</strong></p>.<p>ದಾವಣಗೆರೆ: ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು ₹ 1.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 3,500 ನಗದು ಕಳವು ಮಾಡಿದ್ದಾರೆ.</p>.<p>ಇಲ್ಲಿನ ರಾಜೀವ್ಗಾಂಧಿ ಬಡಾವಣೆಯ ಶರಣಪ್ಪ ಬುಧವಾರ ಮಧ್ಯಾಹ್ನದ ಬಳಿಕ ಚಕ್ಕುಲಿ, ಖಾರಾ ಮಾರಾಟ ಮಾಡಲು ಹೋಗಿದ್ದರು. ಅವರ ಮಗ ಮಂಜುನಾಥ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಖಾರಾ, ಚಕ್ಕಲಿ ತಯಾರಿಸಲು ಹೋಗಿದ್ದ. ಇದೇ ಸಂದರ್ಭದಲ್ಲಿ ಒಳ ಕಳ್ಳರು ಒಳ ನುಗ್ಗಿ ಕಳವು ಮಾಡಿದ್ದಾರೆ. ಮಂಜುನಾಥ ನೀಡಿದ ದೂರಿನಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>