ಇಲ್ಲಿನ ರಾಜೀವ್ಗಾಂಧಿ ಬಡಾವಣೆಯ ಶರಣಪ್ಪ ಬುಧವಾರ ಮಧ್ಯಾಹ್ನದ ಬಳಿಕ ಚಕ್ಕುಲಿ, ಖಾರಾ ಮಾರಾಟ ಮಾಡಲು ಹೋಗಿದ್ದರು. ಅವರ ಮಗ ಮಂಜುನಾಥ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಖಾರಾ, ಚಕ್ಕಲಿ ತಯಾರಿಸಲು ಹೋಗಿದ್ದ. ಇದೇ ಸಂದರ್ಭದಲ್ಲಿ ಒಳ ಕಳ್ಳರು ಒಳ ನುಗ್ಗಿ ಕಳವು ಮಾಡಿದ್ದಾರೆ. ಮಂಜುನಾಥ ನೀಡಿದ ದೂರಿನಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.