<p><strong>ನ್ಯಾಮತಿ</strong>: ಪಟ್ಟಣದ ಕುಂಬಾರ ಬೀದಿಯಲ್ಲಿ ಅಂದಾಜು ಎರಡು ಶತಮಾನಗಳಿಂದ ಅಮ್ಮನ ಮರದ ದೇವಿ ಮರವೆಂದೇ ಹೆಸರು ಪಡೆದಿರುವ ಬೇವಿನ ಮರ ಈಚೆಗೆ ಪೂರ್ಣವಾಗಿ ಒಣಗಿದ್ದರಿಂದ ಅರಣ್ಯ ಇಲಾಖೆ ಅನುಮತಿಯೊಂದಿಗೆ ಶುಕ್ರವಾರ ದೇವಸ್ಥಾನ ಸಮಿತಿಯವರು ತೆರವುಗೊಳಿಸಿದರು.</p>.<p>ಎರಡು ಶತಮಾನಗಳಷ್ಟು ಹಳೆಯದಾದ ಮರ ಒಣಗಿದ್ದರಿಂದ ಮಳೆ, ಗಾಳಿಗೆ ಸಿಲುಕಿ ರೆಂಬೆ ಕೊಂಬೆಗಳು ಬೀಳಬಹುದು ಎಂದು ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಅನುಮತಿ ಪಡೆದು, ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.</p>.<p>‘ನಮ್ಮ ಪೂರ್ವಜರ ಕಾಲದಿಂದಲೂ ಈ ಮರವನ್ನು ದೇವಿಯ ಸ್ವರೂಪ ಎಂದು ಪೂಜಿಸುತ್ತ ಬಂದಿದ್ದೆವು. ಸಾಮೂಹಿಕ ವಿವಾಹ, ವಾರ್ಷಿಕೋತ್ಸವ ಒಳಗೊಂಡಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದೆವು. ಈಗ ಈ ಮರ ಕತ್ತರಿಸುವುದು ತುಂಬಾ ಖೇದವಾಗಿದೆ’ ಎಂದು ಅಮ್ಮನಮರದ ಸೇವಾ ಟ್ರಸ್ಟ್ ಅಧ್ಯಕ್ಷ ಶಂಕರಪ್ಪ ಹೇಳಿದರು.</p>.<p>ಹೊಸಮನೆ ಪದಾಧಿಕಾರಿಗಳಾದ ಎಚ್.ಕೆ.ಚನ್ನೇಶಪ್ಪ, ಎಚ್. ಮಲ್ಲಿಕಾರ್ಜುನ, ಎನ್.ಎಂ. ಮಲ್ಲೇಶ, ಶಿಕ್ಷಕ ಪುಟ್ಟಪ್ಪ, ಎಂ.ಕರಿಬಸವ ಹಾಗೂ ಮಹಿಳಾ ಸಂಘದವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ</strong>: ಪಟ್ಟಣದ ಕುಂಬಾರ ಬೀದಿಯಲ್ಲಿ ಅಂದಾಜು ಎರಡು ಶತಮಾನಗಳಿಂದ ಅಮ್ಮನ ಮರದ ದೇವಿ ಮರವೆಂದೇ ಹೆಸರು ಪಡೆದಿರುವ ಬೇವಿನ ಮರ ಈಚೆಗೆ ಪೂರ್ಣವಾಗಿ ಒಣಗಿದ್ದರಿಂದ ಅರಣ್ಯ ಇಲಾಖೆ ಅನುಮತಿಯೊಂದಿಗೆ ಶುಕ್ರವಾರ ದೇವಸ್ಥಾನ ಸಮಿತಿಯವರು ತೆರವುಗೊಳಿಸಿದರು.</p>.<p>ಎರಡು ಶತಮಾನಗಳಷ್ಟು ಹಳೆಯದಾದ ಮರ ಒಣಗಿದ್ದರಿಂದ ಮಳೆ, ಗಾಳಿಗೆ ಸಿಲುಕಿ ರೆಂಬೆ ಕೊಂಬೆಗಳು ಬೀಳಬಹುದು ಎಂದು ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಅನುಮತಿ ಪಡೆದು, ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.</p>.<p>‘ನಮ್ಮ ಪೂರ್ವಜರ ಕಾಲದಿಂದಲೂ ಈ ಮರವನ್ನು ದೇವಿಯ ಸ್ವರೂಪ ಎಂದು ಪೂಜಿಸುತ್ತ ಬಂದಿದ್ದೆವು. ಸಾಮೂಹಿಕ ವಿವಾಹ, ವಾರ್ಷಿಕೋತ್ಸವ ಒಳಗೊಂಡಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದೆವು. ಈಗ ಈ ಮರ ಕತ್ತರಿಸುವುದು ತುಂಬಾ ಖೇದವಾಗಿದೆ’ ಎಂದು ಅಮ್ಮನಮರದ ಸೇವಾ ಟ್ರಸ್ಟ್ ಅಧ್ಯಕ್ಷ ಶಂಕರಪ್ಪ ಹೇಳಿದರು.</p>.<p>ಹೊಸಮನೆ ಪದಾಧಿಕಾರಿಗಳಾದ ಎಚ್.ಕೆ.ಚನ್ನೇಶಪ್ಪ, ಎಚ್. ಮಲ್ಲಿಕಾರ್ಜುನ, ಎನ್.ಎಂ. ಮಲ್ಲೇಶ, ಶಿಕ್ಷಕ ಪುಟ್ಟಪ್ಪ, ಎಂ.ಕರಿಬಸವ ಹಾಗೂ ಮಹಿಳಾ ಸಂಘದವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>