ಟ್ರಾಫಿಕ್ ಎಸ್ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿದರು. ಬೈಕಲ್ಲಿ ಸುಖಾಸುಮ್ಮನೆ ತಿರುಗಾಡುವ ಯುವಕರನ್ನು ನಿಲ್ಲಿಸಿ, ಹೊರಟಿದ್ದೆಲ್ಲಿಗೆ ಎಂಬುದನ್ನು ವಿಚಾರಿಸಿದರು. ಬಳಿಕ ಬೈಕ್ನಿಂದ ಇಳಿಸಿ ಬಸ್ಕಿ ತೆಗೆಸಿದರು. ಏಪ್ರಿಲ್14ರವರೆಗೆ ಸುಮ್ಮನೆ ಹೊರಗೆ ಬರುವುದಿಲ್ಲ. ಕೊರೊನಾ ಓಡಿಸಲು ಬದ್ಧ ಎಂದು ಪ್ರತಿಜ್ಞೆ ಮಾಡಿಸಿ ಕಳುಹಿಸಿದರು.