‘ಲಾಕ್ಡೌನ್ ಮಾಡಿರುವುದರಿಂದ ನಗರದಲ್ಲಿರುವವರು ಊರಿಗೆ ಜನ ಮರಳುತ್ತಿದ್ದಾರೆ. ಅವರಿಂದ ಗ್ರಾಮದ ಜನರಿಗೆ ಕೊರೊನಾ ಸೋಂಕು ಬರುವ ಸಾಧ್ಯತೆ ಇರುವುದರಿಂದ ಗ್ರಾಮದ ಒಳ ರಸ್ತೆಯನ್ನು ಮುಚ್ಚಲು ಕೆಲ ವಿದ್ಯಾವಂತ ಯುವಕರು ನಿರ್ಧರಿಸಿದ್ದಾರೆ. ದಾವಣಗೆರೆ ನಗರದಿಂದ ಹಾಗೂ ಗೋಪನಾಳದಿಂದ ಗ್ರಾಮವನ್ನು ಪ್ರವೇಶಿಸುತ್ತಿದ್ದ ಒಳ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಕೈದಾಳೆ ಪಂಚಾಯಿತಿ ಸದಸ್ಯರೂ ಆಗಿರುವ ಈ ಗ್ರಾಮದ ಕೆ.ಎಸ್. ಚನ್ನಸಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.