<p><strong>ದಾವಣಗೆರೆ</strong>: ಇಲ್ಲಿನ ವಿರಕ್ತಮಠದಲ್ಲಿ ಬುಧವಾರ 113ನೇ ವರ್ಷದ ಬಸವ ಜಯಂತ್ಯುತ್ಸವ ಆಚರಿಸಲಾಯಿತು.</p>.<p>ಕಾರ್ಯಕ್ರಮಕ್ಕೂ ಮುನ್ನ ವಚನ ಗ್ರಂಥಗಳ ಮೆರವಣಿಗೆ ಹಾಗೂ ಗುರು ಬಸವಣ್ಣನವರ ತೊಟ್ಟಿಲು ಸಮಾರಂಭ ನಡೆಯಿತು.</p>.<p>ವಿರಕ್ತಮಠದಿಂದ ಆರಂಭಗೊಂಡ ವಚನಗ್ರಂಥಗಳ ಮೆರವಣಿಗೆ ಬಕ್ಕೇಶ್ವರ ದೇವಸ್ಥಾನ – ಹಾಸಬಾವಿ ವೃತ್ತ– ಬಸವರಾಜಪೇಟೆ– ಹಳೇಪೇಟೆ ಮಾರ್ಗದಲ್ಲಿ ಸಾಗಿ ವಿರಕ್ತಮಠದಲ್ಲಿ ಕೊನೆಗೊಂಡಿತು. ನಂತರ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆಯಿತು. ನವಜಾತ ಶಿಶುಗಳಿಗೆ ನಾಮಕರಣ ಮಾಡಲಾಯಿತು.</p>.<p>ಲಿಂಗಾಯತ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಬಸವ ಪ್ರಭಾತ್ ಫೇರಿ ಸಮಿತಿಯ ಅಧ್ಯಕ್ಷ ಬಕ್ಕೇಶ್ ಎನ್., ಕಾರ್ಯದರ್ಶಿ ಜಿ.ಮಹಾಂತೇಶ್ ಸೇರಿದಂತೆ ಹಲವರು ಮುಖಂಡರು, ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಬಸವ ಜಯಂತ್ಯುತ್ಸವ ಅಂಗವಾಗಿ ಏಪ್ರಿಲ್ 24ರಿಂದ 30ರ ವರೆಗೆ ವಿರಕ್ತಮಠದಿಂದ ಪ್ರಭಾತ ಫೇರಿ ಹಮ್ಮಿಕೊಳ್ಳಲಾಗಿತ್ತು. ಬಸವ ಕಲಾಲೋಕದಿಂದ ನಿತ್ಯವೂ ವಚನ ಭಜನೆ ನಡೆಯಿತು.</p>.<p>‘ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವಕೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಗಿತ್ತು. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಮೃತ್ಯುಂಜಯ ಅಪ್ಪ, ಹರ್ಡೇಕರ ಮಂಜಪ್ಪನವರು ಬಸವಪ್ರಭಾತ ಫೇರಿಯನ್ನು ಪ್ರಾರಂಭಿಸಿದರು. ನಂತರ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪನವರು ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p><strong>ಜಾತಿಗಣತಿ ವರದಿ ಬಗ್ಗೆ ಸಂಪೂರ್ಣ ಚಿಂತನ ಮಂಥನ ನಡೆಯಲಿ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರಿದ್ದು ಈ ವಿಷಯದಲ್ಲಿ ಅವರ ಮನವಿಯನ್ನೂ ಸರ್ಕಾರ ಪರಿಶೀಲಿಸಲಿ </strong></p><p><strong>-ಬಸವಪ್ರಭು ಸ್ವಾಮೀಜಿ ವಿರಕ್ತಮಠ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಇಲ್ಲಿನ ವಿರಕ್ತಮಠದಲ್ಲಿ ಬುಧವಾರ 113ನೇ ವರ್ಷದ ಬಸವ ಜಯಂತ್ಯುತ್ಸವ ಆಚರಿಸಲಾಯಿತು.</p>.<p>ಕಾರ್ಯಕ್ರಮಕ್ಕೂ ಮುನ್ನ ವಚನ ಗ್ರಂಥಗಳ ಮೆರವಣಿಗೆ ಹಾಗೂ ಗುರು ಬಸವಣ್ಣನವರ ತೊಟ್ಟಿಲು ಸಮಾರಂಭ ನಡೆಯಿತು.</p>.<p>ವಿರಕ್ತಮಠದಿಂದ ಆರಂಭಗೊಂಡ ವಚನಗ್ರಂಥಗಳ ಮೆರವಣಿಗೆ ಬಕ್ಕೇಶ್ವರ ದೇವಸ್ಥಾನ – ಹಾಸಬಾವಿ ವೃತ್ತ– ಬಸವರಾಜಪೇಟೆ– ಹಳೇಪೇಟೆ ಮಾರ್ಗದಲ್ಲಿ ಸಾಗಿ ವಿರಕ್ತಮಠದಲ್ಲಿ ಕೊನೆಗೊಂಡಿತು. ನಂತರ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆಯಿತು. ನವಜಾತ ಶಿಶುಗಳಿಗೆ ನಾಮಕರಣ ಮಾಡಲಾಯಿತು.</p>.<p>ಲಿಂಗಾಯತ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಬಸವ ಪ್ರಭಾತ್ ಫೇರಿ ಸಮಿತಿಯ ಅಧ್ಯಕ್ಷ ಬಕ್ಕೇಶ್ ಎನ್., ಕಾರ್ಯದರ್ಶಿ ಜಿ.ಮಹಾಂತೇಶ್ ಸೇರಿದಂತೆ ಹಲವರು ಮುಖಂಡರು, ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಬಸವ ಜಯಂತ್ಯುತ್ಸವ ಅಂಗವಾಗಿ ಏಪ್ರಿಲ್ 24ರಿಂದ 30ರ ವರೆಗೆ ವಿರಕ್ತಮಠದಿಂದ ಪ್ರಭಾತ ಫೇರಿ ಹಮ್ಮಿಕೊಳ್ಳಲಾಗಿತ್ತು. ಬಸವ ಕಲಾಲೋಕದಿಂದ ನಿತ್ಯವೂ ವಚನ ಭಜನೆ ನಡೆಯಿತು.</p>.<p>‘ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವಕೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಗಿತ್ತು. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಮೃತ್ಯುಂಜಯ ಅಪ್ಪ, ಹರ್ಡೇಕರ ಮಂಜಪ್ಪನವರು ಬಸವಪ್ರಭಾತ ಫೇರಿಯನ್ನು ಪ್ರಾರಂಭಿಸಿದರು. ನಂತರ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪನವರು ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p><strong>ಜಾತಿಗಣತಿ ವರದಿ ಬಗ್ಗೆ ಸಂಪೂರ್ಣ ಚಿಂತನ ಮಂಥನ ನಡೆಯಲಿ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರಿದ್ದು ಈ ವಿಷಯದಲ್ಲಿ ಅವರ ಮನವಿಯನ್ನೂ ಸರ್ಕಾರ ಪರಿಶೀಲಿಸಲಿ </strong></p><p><strong>-ಬಸವಪ್ರಭು ಸ್ವಾಮೀಜಿ ವಿರಕ್ತಮಠ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>