<p><em><strong>ರಾಮಮೂರ್ತಿ ಪಿ.</strong></em></p>.<p><strong>ದಾವಣಗೆರೆ</strong>: ಚಿಕಿತ್ಸೆ ಅರಸಿ ದೂರದ ಊರುಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆಯೇ ಈಗ ರೋಗಗ್ರಸ್ಥವಾಗಿದೆ!</p><p>ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯಗಳು ಸ್ವಚ್ಛತೆ ಕಾಣದೆ ನಾರುತ್ತಿವೆ. ರೋಗಿಗಳು ಹಾಗೂ ಅವರ ಆರೈಕೆಯಲ್ಲಿ ತೊಡಗಿರುವವರು ಕೈತೊಳೆಯಬೇಕೆಂದರೆ ನೀರಿಲ್ಲ. ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಲ್ಲಿ ಗೋಡೆಗಳೂ ಬಿರುಕು ಬಿಟ್ಟಿವೆ.</p><p>ಹೊರ ರೋಗಿ ಚೀಟಿ ಪಡೆಯಲು ಪ್ರತಿ ದಿನವೂ ಜನ ಸಾಲುಗಟ್ಟಿ ನಿಲ್ಲುವುದು, ಎಕ್ಸ್–ರೇ, ಸ್ಕ್ಯಾನಿಂಗ್ ಕೊಠಡಿಗಳ ಮುಂದೆ ನಾಮುಂದು– ತಾಮುಂದು ಎಂದು ರೋಗಿಗಳು ವಾಗ್ವಾದ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ.</p><p>ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದವರು ಮಾತ್ರವಲ್ಲದೇ ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ.</p><p>ಹೊರ ರೋಗಿಗಳ ವಿಭಾಗದಲ್ಲಿ ದಿನವೊಂದಕ್ಕೆ 1,000 ದಿಂದ 1,200 ಮಂದಿ ಚಿಕಿತ್ಸೆ ಪಡೆಯುತ್ತಾರೆ. ವೈದ್ಯರು ಹಾಗೂ ಶುಶ್ರೂಷಕರ ಕೊರತೆಯಿಂದಾಗಿ ಗುಣಮಟ್ಟದ ಚಿಕಿತ್ಸೆಯು ದೂರದ ಮಾತಾಗಿದೆ.</p><p>1976ರಲ್ಲಿ ನಿರ್ಮಾಣಗೊಂಡಿದ್ದ ಆಸ್ಪತ್ರೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಸೆಂಟ್ರಲ್ ಬ್ಲಾಕ್, ಓ.ಟಿ ಬ್ಲಾಕ್, ಉತ್ತರ ಬ್ಲಾಕ್ನ ಚಾವಣಿ ಹಾಗೂ ಗೋಡೆಗಳಲ್ಲಿ ಕೆಲವೆಡೆ ಕಬ್ಬಿಣದ ಸರಳುಗಳು ಹೊರಕಾಣುತ್ತಿವೆ.</p><p>‘ಆಸ್ಪತ್ರೆಯಲ್ಲಿನ ಒಳಚರಂಡಿಯು ಆಗಾಗ ಕಟ್ಟಿಕೊಳ್ಳುವುದರಿಂದ ಇಲ್ಲಿನ ವೈದ್ಯರು ಹಾಗೂ ರೋಗಿಗಳು ದುರ್ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಆಸ್ಪತ್ರೆಯ ಶೌಚಾಲಯಗಳಲ್ಲಿ ಅಳವಡಿಸಲಾಗಿರುವ ಕೈತೊಳೆಯುವ ಬೇಸಿನ್ಗಳಿಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ತೊಟ್ಟಿಯೊಂದರಲ್ಲಿ ನೀರನ್ನು ಶೇಖರಿಸಿಟ್ಟಿದ್ದು, ರೋಗಿಗಳು ಅದರಲ್ಲೇ ಕೈತೊಳೆಯುವ ಸ್ಥಿತಿ ಇದೆ.</p><p>ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಕೊರತೆ ಇದೆ. ಎಕ್ಸ್–ರೇ ಹಾಗೂ ಎಂಆರ್ಐ ಸ್ಕ್ಯಾನಿಂಗ್ ಯಂತ್ರಗಳು ಒಂದೊಂದು ಮಾತ್ರ ಇವೆ. ಹೀಗಾಗಿ ಎಕ್ಸ್–ರೇ, ಸ್ಕ್ಯಾನಿಂಗ್ ವಿಭಾಗಗಳ ಮುಂದೆ ವಿಪರೀತ ಜನದಟ್ಟಣೆ ಉಂಟಾಗುತ್ತಿದೆ.</p><p>‘ಮೂರ್ನಾಲ್ಕು ತಾಸು ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇರುವುದರಿಂದ ದೂರದ ಊರುಗಳಿಂದ ಬರುವ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಬೆಳಿಗ್ಗೆ ಬಂದು ನಿಂತವರು ಮಧ್ಯಾಹ್ನ ಕಳೆದರೂ ಎಕ್ಸ್–ರೇ ಮಾಡಿಸಲು ಆಗುತ್ತಿಲ್ಲ’ ಎಂದು ದಾವಣಗೆರೆಯ ಮಹಮ್ಮದ್ ಆರಿಫ್ ಹಾಗೂ ಕೋಲ್ಕುಂಟೆಯ ರತ್ನಮ್ಮ ದೂರಿದರು.</p><p>‘ಕೈ ಮೇಲೆ ಗಡ್ಡೆಯಾಗಿದ್ದು, ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದೇನೆ. ಇಂದು ಹೆಸರು ನೋಂದಾಯಿಸಿದರೆ ಮತ್ತೊಂದು ದಿನ ಬರಲು ಹೇಳುತ್ತಾರೆ. ಮತ್ತೆ ಬಂದು ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಿದೆ’ ಎಂದು ಬೇಸರದಿಂದಲೇ ಹೇಳಿದರು ಹುಲಿಕಟ್ಟೆಯ ಚಂದ್ರಪ್ಪ.</p><p>ಆಸ್ಪತ್ರೆ ಆವರಣದಲ್ಲಿರುವ ಓವರ್ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ರಾಮಮೂರ್ತಿ ಪಿ.</strong></em></p>.<p><strong>ದಾವಣಗೆರೆ</strong>: ಚಿಕಿತ್ಸೆ ಅರಸಿ ದೂರದ ಊರುಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆಯೇ ಈಗ ರೋಗಗ್ರಸ್ಥವಾಗಿದೆ!</p><p>ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯಗಳು ಸ್ವಚ್ಛತೆ ಕಾಣದೆ ನಾರುತ್ತಿವೆ. ರೋಗಿಗಳು ಹಾಗೂ ಅವರ ಆರೈಕೆಯಲ್ಲಿ ತೊಡಗಿರುವವರು ಕೈತೊಳೆಯಬೇಕೆಂದರೆ ನೀರಿಲ್ಲ. ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಲ್ಲಿ ಗೋಡೆಗಳೂ ಬಿರುಕು ಬಿಟ್ಟಿವೆ.</p><p>ಹೊರ ರೋಗಿ ಚೀಟಿ ಪಡೆಯಲು ಪ್ರತಿ ದಿನವೂ ಜನ ಸಾಲುಗಟ್ಟಿ ನಿಲ್ಲುವುದು, ಎಕ್ಸ್–ರೇ, ಸ್ಕ್ಯಾನಿಂಗ್ ಕೊಠಡಿಗಳ ಮುಂದೆ ನಾಮುಂದು– ತಾಮುಂದು ಎಂದು ರೋಗಿಗಳು ವಾಗ್ವಾದ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ.</p><p>ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದವರು ಮಾತ್ರವಲ್ಲದೇ ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ.</p><p>ಹೊರ ರೋಗಿಗಳ ವಿಭಾಗದಲ್ಲಿ ದಿನವೊಂದಕ್ಕೆ 1,000 ದಿಂದ 1,200 ಮಂದಿ ಚಿಕಿತ್ಸೆ ಪಡೆಯುತ್ತಾರೆ. ವೈದ್ಯರು ಹಾಗೂ ಶುಶ್ರೂಷಕರ ಕೊರತೆಯಿಂದಾಗಿ ಗುಣಮಟ್ಟದ ಚಿಕಿತ್ಸೆಯು ದೂರದ ಮಾತಾಗಿದೆ.</p><p>1976ರಲ್ಲಿ ನಿರ್ಮಾಣಗೊಂಡಿದ್ದ ಆಸ್ಪತ್ರೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಸೆಂಟ್ರಲ್ ಬ್ಲಾಕ್, ಓ.ಟಿ ಬ್ಲಾಕ್, ಉತ್ತರ ಬ್ಲಾಕ್ನ ಚಾವಣಿ ಹಾಗೂ ಗೋಡೆಗಳಲ್ಲಿ ಕೆಲವೆಡೆ ಕಬ್ಬಿಣದ ಸರಳುಗಳು ಹೊರಕಾಣುತ್ತಿವೆ.</p><p>‘ಆಸ್ಪತ್ರೆಯಲ್ಲಿನ ಒಳಚರಂಡಿಯು ಆಗಾಗ ಕಟ್ಟಿಕೊಳ್ಳುವುದರಿಂದ ಇಲ್ಲಿನ ವೈದ್ಯರು ಹಾಗೂ ರೋಗಿಗಳು ದುರ್ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಆಸ್ಪತ್ರೆಯ ಶೌಚಾಲಯಗಳಲ್ಲಿ ಅಳವಡಿಸಲಾಗಿರುವ ಕೈತೊಳೆಯುವ ಬೇಸಿನ್ಗಳಿಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ತೊಟ್ಟಿಯೊಂದರಲ್ಲಿ ನೀರನ್ನು ಶೇಖರಿಸಿಟ್ಟಿದ್ದು, ರೋಗಿಗಳು ಅದರಲ್ಲೇ ಕೈತೊಳೆಯುವ ಸ್ಥಿತಿ ಇದೆ.</p><p>ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಕೊರತೆ ಇದೆ. ಎಕ್ಸ್–ರೇ ಹಾಗೂ ಎಂಆರ್ಐ ಸ್ಕ್ಯಾನಿಂಗ್ ಯಂತ್ರಗಳು ಒಂದೊಂದು ಮಾತ್ರ ಇವೆ. ಹೀಗಾಗಿ ಎಕ್ಸ್–ರೇ, ಸ್ಕ್ಯಾನಿಂಗ್ ವಿಭಾಗಗಳ ಮುಂದೆ ವಿಪರೀತ ಜನದಟ್ಟಣೆ ಉಂಟಾಗುತ್ತಿದೆ.</p><p>‘ಮೂರ್ನಾಲ್ಕು ತಾಸು ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇರುವುದರಿಂದ ದೂರದ ಊರುಗಳಿಂದ ಬರುವ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಬೆಳಿಗ್ಗೆ ಬಂದು ನಿಂತವರು ಮಧ್ಯಾಹ್ನ ಕಳೆದರೂ ಎಕ್ಸ್–ರೇ ಮಾಡಿಸಲು ಆಗುತ್ತಿಲ್ಲ’ ಎಂದು ದಾವಣಗೆರೆಯ ಮಹಮ್ಮದ್ ಆರಿಫ್ ಹಾಗೂ ಕೋಲ್ಕುಂಟೆಯ ರತ್ನಮ್ಮ ದೂರಿದರು.</p><p>‘ಕೈ ಮೇಲೆ ಗಡ್ಡೆಯಾಗಿದ್ದು, ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದೇನೆ. ಇಂದು ಹೆಸರು ನೋಂದಾಯಿಸಿದರೆ ಮತ್ತೊಂದು ದಿನ ಬರಲು ಹೇಳುತ್ತಾರೆ. ಮತ್ತೆ ಬಂದು ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಿದೆ’ ಎಂದು ಬೇಸರದಿಂದಲೇ ಹೇಳಿದರು ಹುಲಿಕಟ್ಟೆಯ ಚಂದ್ರಪ್ಪ.</p><p>ಆಸ್ಪತ್ರೆ ಆವರಣದಲ್ಲಿರುವ ಓವರ್ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>